News Karnataka Kannada
Saturday, May 11 2024
ಬೀದರ್

ಮಲ್ಲಿಕಾರ್ಜುನ ಖರ್ಗೆ ಅವರಿಂದಲೇ ಕಾಂಗ್ರೆಸ್ ಸರ್ವನಾಶ: ಶಿವರಾಜ್ ಸಿಂಗ್ ಚೌವ್ಹಾಣ್ ಕಿಡಿ

ಲೋಕಸಭಾ ಚುನಾವಣೆ ಹಿನ್ನೆಲೆ ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನ ಹುಮನಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮದ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಮಕ್ಕೆ ಚಾಲನೆ ನೀಡಿದರು.
Photo Credit : News Kannada

ಬೀದರ್:‌ ಲೋಕಸಭಾ ಚುನಾವಣೆ ಹಿನ್ನೆಲೆ ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನ ಹುಮನಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮದ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಕನ್ನಡದಲ್ಲಿ ಭಾಷಣ ಆರಂಭಿಸಿ, ವಿಶ್ವಗುರು ಬಸವಣ್ಣನವರನ್ನ ನೆನೆದು ಮಾತನಾಡಿದ್ದರು. ರಾಜ್ಯದಲ್ಲಿ ಈ ಬಾರಿ 28ಕ್ಕೂ 28 ಕ್ಷೇತ್ರ ಗೆಲ್ಲಬೇಕಾಗಿದೆ. ಕಾರ್ಯಕರ್ತರಿಂದ ನಮ್ಮ ಗೆಲುವು ಸಾಧ್ಯವಿದೆ. ಬಿಜೆಪಿ ಪಕ್ಷ ಕೇವಲ ಪಕ್ಷವಲ್ಲಾ. ಇದು ಒದು ಒಂದು ಪರಿವಾರ. ನಮ್ಮ ಸಂಕಲ್ಪ ಶಕ್ತಿಶಾಲಿ ಭಾರತ ನಿರ್ಮಾಣ ಮಾಡುವುದಿದೆ ಎಂದರು.

ದೇಶದ ನಾಲ್ಕು ದಿಕ್ಕಿ‌ನಲ್ಲೂ ಅಭಿವೃದ್ಧಿ ಪರ್ವ ಶುರುವಾಗಿದೆ. ನಮಗೆ ರಾಮ ಮಂದಿರ ನಿರ್ಮಾಣ ನಂಬಿಕೆ ಇರಲಿಲ್ಲ. ಆದರೆ ಇವತ್ತು ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಮುಗಿಸಲು ಅಧ್ಯಕ್ಷ ಆಗಿದ್ದಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ರು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ ಅವರ ಕನಸು ನನಸಾಗಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ ಸಚಿವ ಈಶ್ವರ ಖಂಡ್ರೆ ಹಾಗು ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದ್ರು. ಅಂಧೆ ಔರ್ ಭರೆ ಈಶ್ವರ್ ಖಂಡ್ರೆ ಎಂದು ಖಂಡ್ರೆ ವಿರುದ್ದ ವಾಗ್ದಾಳಿ‌ ನಡೆಸಿದ ಖೂಬಾ, 10 ವರ್ಷದ ಅಧಿಕಾರ ಅವಧಿಯ ಯೋಜನೆಗಳ ಬಗ್ಗೆ 5 ಗಂಟೆ ಮಾತಾಡಬಹದು. ನಾನು ಸಂಸದನಾದ ಮೇಲೆ 13 ರೈಲುಗಳನ್ನ ನಾನು ಬೀದರ್‌ನಿಂದ ಆರಂಭಿಸಿದ್ದೇನೆ. ಸಿಪೆಟ್ ಕಾಲೇಜ್, ಪವರ್ ಸ್ಟೆಷನ್ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನ ತಂದಿದ್ದೇವೆ. ನಮ್ಮ ಕಾರ್ಯಕರ್ತರು ಚಪ್ಪಾಳೆ ತಟ್ಟಿದರೆ ಈಶ್ವರ್ ಖಂಡ್ರೆ ಕಿವಿ ತೆರಯಬೇಕು. ಆ ರೀತಿ ಚಪ್ಪಾಳೆ ತಟ್ಟಿ ಎಂದರು. ಖರ್ಗೆ ಅಭಿನಂದನಾ ಕಾರ್ಯಕ್ರಮದ ಕುರಿತು ಮಾತನಾಡಿ, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು, ಅನೇಕ ಹೋರಾಟಗಾರರ ಫಲವಾಗಿ 371(ಜೆ) ಜಾರಿಯಾಗಿತ್ತು. ಬಿಎಸ್‌ವೈ, ಎಲ್.ಕೆ.ಅಡ್ವಾನಿ, ರಾಜ್ಯ ಸಂಸದರ ಪರಿಶ್ರಮ ಫಲವಾಗಿ ಜಾರಿಯಾಗಿದೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು 371 (ಜೆ) ಕ್ರೆಡಿಟ್ ಕಾಂಗ್ರೆಸ್ ತೆಗೆದುಕೊಳ್ಳಲು ಹೊರಟಿದೆ ಎಂದು ವ್ಯಂಗ್ಯವಾಡಿ, ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭ ವಿಫಲವಾಗಿದೆ ಎಂದು ಖೂಬಾ ಹೇಳಿದ್ರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು