ಬೀದರ್: ಬರ ಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ ಏಳು ತಾಲೂಕುಗಳ ಸೇರ್ಪಡೆ ಮಾಡಲಾಗಿದೆ. ಬೀದರ್ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ತಿಕೋಟಾವನ್ನು ಕಂದಾಯ ಇಲಾಖೆಯಿಂದ ಬರ ಪೀಡಿತ ತಾಲೂಕುಗಳಾಗಿ ಸೇರ್ಪಡೆ ಮಾಡಲಾಗಿದೆ.
ಬರಪೀಡಿತ ತಾಲೂಕಿನ ಘೋಷಣೆಯಿಂದ ಪ್ರಯೋಜನ ಏನು.?: ಹೀಗೆ ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಘೋಷಿಸಿದರೇ, ಪರಿಹಾರ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಅಲ್ಲಿಂದ ಎನ್ ಡಿ ಆರ್ ಎಫ್ ಅಡಿ ಪರಿಹಾರ ಕೇಳಲಾಗುತ್ತದೆ.
ಈ ಬಳಿಕ ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್ ನಿಂದ ಹಣ ಸೇರಿಸಿ, ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತೆ. ರಾಸುಗಳಿಗೆ ಉಚಿತ ಮೇವು ಪೂರೈಕೆ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲ ಕಲ್ಪಿಸಲಾಗುತ್ತದೆ.