News Karnataka Kannada
Thursday, May 02 2024
ರಾಮನಗರ

ಭಾರಿ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿ ಜಲಾವೃತ

Bengaluru-Mysuru highway waterlogged due to heavy rains
Photo Credit : News Kannada

ರಾಮನಗರ: ರಾಮನಗರ ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ.

ಶನಿವಾರ ಸಂಜೆ 5 ಗಂಟೆಗೆ ಭಾರಿ ಮಳೆ ಆರಂಭವಾಗಿದ್ದು, ಕೆಂಪನಹಳ್ಳಿ ಗೇಟ್‌ ನಿಂದ ಕಲ್ಲುಗೋಪನಹಳ್ಳಿ, ದಾಸಪ್ಪನ ದೊಡ್ಡಿ, ಬಳಿಯ ರಸ್ತೆ ಕೆಳಸೇತುವೆಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿತ್ತು. ಇದರಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ದ್ವಿಚಕ್ರ ವಾಹನ ಸವಾರರು ವಿಧಿಯಿಲ್ಲದೆ ಮಳೆಯಲ್ಲಿಯೇ ನೆನೆಯುತ್ತಾ ರಸ್ತೆಯಲ್ಲಿ ಕಾಯುವಂತಾಯಿತು.

ಕಳೆದ ವರ್ಷವೂ ಮಳೆಗಾಲದಲ್ಲಿ ಹೆದ್ದಾರಿ ಮತ್ತು ಸರ್ವಿಸ್‌ ರಸ್ತೆ ಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು