ರಾಮನಗರ: ರಾಮನಗರ ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ.
ಶನಿವಾರ ಸಂಜೆ 5 ಗಂಟೆಗೆ ಭಾರಿ ಮಳೆ ಆರಂಭವಾಗಿದ್ದು, ಕೆಂಪನಹಳ್ಳಿ ಗೇಟ್ ನಿಂದ ಕಲ್ಲುಗೋಪನಹಳ್ಳಿ, ದಾಸಪ್ಪನ ದೊಡ್ಡಿ, ಬಳಿಯ ರಸ್ತೆ ಕೆಳಸೇತುವೆಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿತ್ತು. ಇದರಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ದ್ವಿಚಕ್ರ ವಾಹನ ಸವಾರರು ವಿಧಿಯಿಲ್ಲದೆ ಮಳೆಯಲ್ಲಿಯೇ ನೆನೆಯುತ್ತಾ ರಸ್ತೆಯಲ್ಲಿ ಕಾಯುವಂತಾಯಿತು.
ಕಳೆದ ವರ್ಷವೂ ಮಳೆಗಾಲದಲ್ಲಿ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು.