News Karnataka Kannada
Saturday, May 04 2024
ಬೀದರ್

ವಿಧಿ ಇಲ್ಲದೇ ಕಾಂಗ್ರೆಸ್‌ ಸಚಿವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತಿದೆ : ಅಶೋಕ್‌

ರೋಧ ಪಕ್ಷದ ನಾಯಕ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಳಿದ ಎಲ್ಲಾ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಲಿದ್ದೆವೆ,ಎಲ್ಲಾ 28 ಕ್ಷೇತ್ರಗಳಿಗೂ ಟಿಕೆಟ್ ಕ್ಲೀಯರ್ ಮಾಡುತ್ತೆವೆ ಎಂದಿದ್ದಾರೆ.
Photo Credit : NewsKarnataka

ಬೀದರ್ : ಜಿಲ್ಲೆಯ  ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಳಿದ ಎಲ್ಲಾ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಲಿದ್ದೆವೆ,ಎಲ್ಲಾ 28 ಕ್ಷೇತ್ರಗಳಿಗೂ ಟಿಕೆಟ್ ಕ್ಲೀಯರ್ ಮಾಡುತ್ತೆವೆ ಎಂದಿದ್ದಾರೆ.

ಕಾಂಗ್ರೆಸ್ ನವರು ಹೇಳಿದರು ಪ್ರತಿ ಮೀಟಿಂಗ್ ಆದಾಗಲು 20 ಸಚಿವರು ಸ್ಪರ್ಧಿಸುತ್ತಾರೆ ಎಂದಿದ್ದರು,ಅಲ್ಲದೇ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಚಿವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು ಆದರೆ ಬರ್ತಾ ಬರ್ತಾ ಒಬ್ಬರು ಸಚಿವರು ಲೋಕಸಭೆ ಚುನಾವಣೆ ಸ್ಪರ್ಧಿಸಲು ಮುಂದೆ ಬಂದಿಲ್ಲಾ. ಈಗ ವಿಧಿ ಇಲ್ಲದೇ ಗತಿ ಇಲ್ಲದೇ ಕಾಂಗ್ರೆಸ್ನ ಪಾರ್ಥಮಿಕ ಸದಸ್ಯತ್ವ ಪಡೆದೇ ಇರೋರಿಗೆ ಟಿಕೆಟ್ ನೀಡಲಾಗಿದೆ ಎಂದು ಟೀಕಿಸಿದರು.

ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳು, ಹೆಂಡತಿ, ಅಣ್ಣ ತಮ್ಮಂದಿರಿಗು, ಸೊಸೆಯರನ್ನು ಈಗ ಬೀದಿಗೆ ತಂದಿದ್ದಾರೆ.ಕಾಂಗ್ರೆಸ್ನ ಯೋಗ್ಯತೆಗೆ ಯಾರೂ ಕಾರ್ಯಕರ್ತರು ಸಿಗಲಿಲ್ಲವಾ?..
ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹುಡುಕಿ ಕೊಡುತ್ತಿದ್ದಾರೆ.
ನಿಮ್ಮಲ್ಲಿ ವಿಧಿ ಇಲ್ಲದೇ ಸಚಿವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತಿದೆ,ಈ ಬಾರಿ ನರೇಂದ್ರ ಮೋದಿ ಅವರು 400 ಸೀಟ್ಗಳ ಟಾರ್ಗೆಟ್ ಕೊಟ್ಟಿದಾರೆ,400 ಸೀಟುಗಳ ಗುರಿ ಕೂಡ ನಾವು ಮುಟ್ಟುತ್ತೆವೆ ಎಂದು ಹೇಳಿದರು.

ಕಳೆದ ಬಾರಿ ವಿರೋಧ ಪಕ್ಷದ ನಾಯಕ ಆಗಲು ಕಾಂಗ್ರೆಸ್ಗೆ ಯೋಗ್ಯತೆ ಇರಲಿಲ್ಲಾ,ಈ ಬಾರಿ ಅದಕ್ಕಿಂತ ದಯನೀಯ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ,ನಾವು ಆಟ ಆಡುವುದಕ್ಕೂ ಮುನ್ನ ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿ ಅಂತ ಹೇಳಿದ್ದೆವೆ.ಅವರ ಬಳಿ ಕ್ಯಾಪ್ಟನ್ ಯಾರೂ ಅಂತನೇ ಗೊತ್ತಾಗುತ್ತಿಲ್ಲಾ ಎಂದು ಟೀಕಿಸಿ ಮಾತನಾಡಿದರು.ಮೊನ್ನೆ ನಡೆದ ಚುನಾವಣೆಯಲ್ಲಿ ಸೆಮಿ ಫೈನಲ್ ಮ್ಯಾಚ್ ನಾವು ಗೆದಿದ್ದೆವೆ, ಫೈನಲ್ ಕೂಡ ಗೆಲ್ಲುತ್ತೆವೆ ಎಂದು ಸಂಪೂರ್ಣ ಭರವಸಯಿಂದ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು