ಬೀದರ್: ಅಭ್ಯರ್ಥಿ ಘೋಷಣೆಗೂ ಮುನ್ನ, ಮುಂದಿನ ಎಮ್ಪಿ ಸಾಗರ್ ಖಂಡ್ರೆ ಎಂದು ಪೋಸ್ಟ್ ಹರಿದಾಡುತ್ತಿದ್ದು, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಗೂ ಆಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು, ಈಗಾಗಲೇ ಸಾಗರ್ ಖಂಡ್ರೆ ಅಭಿಮಾನಿಗಳು ಸಾಗರ್ ಖಂಡ್ರೆ ಪರ ಪೋಸ್ಟ್ಗಳಲ್ಲಿ ಬೀದರ್ ಜಿಲ್ಲೆಯ ಮುಂದಿನ ಎಮ್.ಪಿ ಸಾಗರ್ ಖಂಡ್ರೆ, ಯುವ ನಾಯಕ ಅಂತೆಲ್ಲಾ ಪೋಸ್ಟ್ಗಳನ್ನ ಬರೆದುಕೊಂಡು ಪೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಭಾಲ್ಕಿ, ಬೀದರ್ ಮತ್ತು ಔರಾದ ಪಟ್ಟಣಗಳಲ್ಲಿ ಪಟಾಕಿ ಸಿಡಿಸಿ ಖಂಡ್ರೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಎಮ್.ಪಿ ಸಾಗರ್ ಖಂಡ್ರೆ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.