ಬೀದರ್: ಬರಗಾಲ ಸಮೀಕ್ಷೆಯನ್ನು ಸ್ಯಾಟಲೈಟ್ ಮೂಲಕ ಮಾಡುತ್ತಿದ್ದೇವೆ. ಆದರೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸ್ಥಳದ ತೇವಾಂಶ ಎಷ್ಟಿದೆ, ಮಳೆ ಎಷ್ಟಾಗಿದೆ ಅನ್ನುವ ಮಾಹಿತಿ ಅವರಿಗೆ ಇದೆ. ಕೇಂದ್ರ, ರಾಜ್ಯದ ಮಾರ್ಗಸೂಚಿ ಅನ್ವಯ ಬರಗಾಲ ಘೋಷಣೆ ಮಾಡಲಾಗುತ್ತದೆ. ಅಂತವರ ಅಸಂಬದ್ದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಅನುಷ್ಠಾನದಿಂದ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಅಸ್ತಿತ್ವ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದರು. ಭಗವಂತ ಖೂಬಾ ಅವರಿಗೆ ಅಭಿವೃದ್ಧಿ ಕಾರ್ಯ ಎಂದರೆ ಏನೆಂದೇ ಗೊತ್ತಿಲ್ಲ ಎಂದರು.