ಬೀದರ್: ಬಿಜೆಪಿಯ ಸ್ಥಿತಿ ಈಗ ಮುಳುಗುವ ಹಡಗಿನಂತಾಗಿದೆ. ಯಾರೂ ಅದರಲ್ಲಿ ಕುಳಿತು ಪಾತಾಳಕ್ಕೆ ಬೀಳಲು ಬಯಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಪರೇಷನ್ ಕಮಲ ಕುರಿತು ವ್ಯಂಗ್ಯವಾಡಿದರು.
ಬೀದರ್ನಲ್ಲಿ ಬುಧವಾರ ಹೇಳಿಕೆ ನೀಡಿದ ಅವರು ‘ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ.
ಅವರು ಏನೇ ಮಾಡಿದರೂ ಕಾಂಗ್ರೆಸ್ ಸರ್ಕಾರಕ್ಕೆ ಧಕ್ಕೆ ಆಗುವುದಿಲ್ಲ. ನಾವು ಮನಸ್ಸು ಮಾಡಿದರೆ ಬಿಜೆಪಿ ಹಾಗೂ ಜೆಡಿಎಸ್ ಪೂರ್ಣ ಕಿತ್ಕೊಂಡು ಬರುತ್ತೆ. ಆದರೆ ಹಾವು ಹಾಗೆಲ್ಲ ಮಾಡಲ್ಲ. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪರಿಶೀಲನೆ ಮಾಡಿ ಪಕ್ಷದಲ್ಲಿ ಸೇರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.
ಕೆಇಎ ಪರೀಕ್ಷೆ ಅಕ್ರಮದ ಆರೋಪಿ ಆರ್.ಡಿ. ಪಾಟೀಲ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಯಾರಿಗೆ ಬಂಧಿಸಬೇಕು, ಯಾರನ್ನು ಬಂಧಿಸಬಾರದು ಎಂಬುದು ತನಿಖಾಧಿಕಾರಿಗಳ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಏನಾದರೂ ಆದರೆ ಪರಿಶೀಲಿಸಲು ಸರ್ಕಾರ ಇದೆ. ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಪಾಪದ ಕೆಲಸ ತೊಳೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಹಂತ ಹಂತವಾಗಿ ಎಲ್ಲವೂ ಸುಧಾರಣೆ ಮಾಡಿ ಜನರಿಗೆ ಉತ್ತಮ ಆಡಳಿತ ಕೊಡ್ತಿವಿ’ ಎಂದು ಹೇಳಿದರು.