News Karnataka Kannada
Friday, May 03 2024
ಬೀದರ್

ಬೀದರ್‌: ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದ ಶಾಸಕ ರಹೀಂ ಖಾನ್‌

Bidar: MLA Rahim Khan visits various villages and inspects crop damage
Photo Credit : By Author

ಬೀದರ: ಬೀದರ ಶಾಸಕ ರಹೀಂ ಖಾನ್‌ ಅವರು ರವಿವಾರ ಬೀದರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು. ಕ್ಷೇತ್ರದ ಮರಕಲ್, ದದ್ದಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು ರೈತರ ಅಹವಾಲು ಆಲಿಸಿದರು.

ಭಾರಿ ಮಳೆ ಮತ್ತು ಗಾಳಿ ಬೀಸಿದ ಪರಿಣಾಮ ಬಿಳಿ ಜೋಳ, ಮಾವಿನಕಾಯಿ, ತರಕಾರಿ ಬೆಳೆಗಳು ಹಾಳಾಗಿವೆ ಎಂದು ರೈತರು ಹೇಳಿದರು. ಬೆಳೆದು ನಿಂತಿರುವ ಬೆಳೆಗಳೆಲ್ಲವೂ ನೀರು ಪಾಲಾಗಿವೆ ಎಂದು ಶಾಸಕರ ಎದುರು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು.

ಈ ವೇಳೆ ಮಾತನಾಡಿದ ಶಾಸಕರಾದ ರಹೀಂ ಖಾನ ಅವರು. ಬೆಳೆ ಹಾನಿಯನ್ನು ಖುದ್ದು ವೀಕ್ಷಿಸಿದ್ದೇನೆ.ರೈತರು ಸಂಕಷ್ಟದಲ್ಲಿರುವುದು ಮನವರಿಕೆಯಾಗಿದೆ. ಪ್ರಕೃತಿ ವಿಕೋಪದಿಂದ ಹೀಗಾಗಿದೆ. ಈಗ ಹಾಳಾಗಿರುವ ಎಲ್ಲ ಬೆಳೆಗಳಿಗೆ ಸರಕಾರದಿಂದ ಕೂಡಲೇ ಪರಿಹಾರ ಕೊಡಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ ಅವರೂ ಸಹ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದರು. ಬೀದರ ತಹಸೀಲ್ದಾರ, ಕೃಷಿ ಇಲಾಖೆಯ ಸಹಾಯಕ ನಿರ್ಧೇಶಕ ಧೂಳಪ್ಪ, ತಾಪಂನ ಮಾಜಿ ಸದಸ್ಯ ಬಸವರಾಜ ಬುಯ್ಯ, ದೀಪಕ ಮರಕಲ್, ಚಂದ್ರಶೇಕರ ಹಗೂ ಗ್ರಾಮಸ್ಥರು, ರೈತರು ಈ ವೇಳೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು