ಬೀದರ್: ನಗರದ ಕೆ.ಎಚ್.ಬಿ. ಕಾಲೊನಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹ 19 ಲಕ್ಷ ಅನುದಾನದಲ್ಲಿ ರಸ್ತೆ ಬದಿ ಫುಟ್ಪಾತ್ ನಿರ್ಮಾಣ, ಬೀದಿ ದೀಪ ಅಳವಡಿಕೆ ಹಾಗೂ ಮರ ನೆಡುವ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಶನಿವಾರ ಚಾಲನೆ ನೀಡಿದರು.
ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಗುತ್ತಿಗೆದಾರ ಪೃಥ್ವಿರಾಜ ನಿಟ್ಟೂರಕರ್, ಸಾಯಿಕುಮಾರ ದಾನಾ, ಮಹಾಲಿಂಗ ಶೀಲವಂತ, ಪ್ರಸನ್ನ ಡಾಂಗೆ, ಪ್ರವೀಣಕುಮಾರ ನಿಟ್ಟೂರಕರ್, ರಾಜಕುಮಾರ ಸಾಗರ, ಪ್ರೇಮನಾಥ ಗಾಂವಕರ್, ರವಿಕಾಂತ ಜ್ಯಾಂತಿ, ಶ್ರೀಕಾಂತ ರೆಡ್ಡಿ, ಶಿವಕುಮಾರ ಬಾಪುರೆ, ರವಿ ದಾನಾ, ಅಪ್ಪು ಬಿರಾದಾರ ಇದ್ದರು.