ಬೀದರ್: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ವತಿಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಕಮಲನಗರ ತಾಲೂಕಿನ ಹೊಳಸಮುದ್ರದ ಭೀಮ ನೀಲಕಂಠ ರಾವ್ ಹಂಗರಗೆ ಆಯ್ಕೆಯಾಗಿದ್ದಾರೆ.
ವಿದೇಶದಲ್ಲಿ ಕನ್ನಡಿಗರ ಸೇವೆಯನ್ನು ಪರಿಗಣಿಸಿ ನೀಲಕಂಠ ರಾವ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಜ್ಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.