ಮಂಗಳೂರು: ಮಂಗಳೂರು ಯುನಿವರ್ಸಿಟಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎನ್.ಎಸ್.ಎಸ್. ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಎನ್ಎಸ್ಎಸ್ ಸ್ವಯಂಸೇವಕರ ನಾಯಕತ್ವದಲ್ಲಿ, ಕಾಲೇಜಿನ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಯಬದ್ಧವಾಗಿ ಆಯ್ದ ಹಾಡುಗಳನ್ನು ಹಾಡಿದರು, ಅದು ಕನ್ನಡ ನಾಡಿನ ಹಿರಿಮೆಯನ್ನು ಸಾರುತಿತ್ತು.
ಪ್ರಾಂಶುಪಾಲ (ಪ್ರಭಾರ) ಡಾ.ಹರೀಶ್ ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಪ್ರೋಗ್ರಾಂ ಅಧಿಕಾರಿಗಳಾದ ಡಾ.ಸುರೇಶ್, ಡಾ.ಗಾಯತ್ರಿ ಎನ್., ಡಾ.ಮೀನಾಕ್ಷಿ ಎಂ., ಡಾ.ಕುಮಾರಸ್ವಾಮಿ ಎಂ., ಧೀರಜ್, ಸುನಿಲ್, ಡಾ.ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.