ಬೀದರ್: ಬಸವ ಉತ್ಸವ-2023ರ ಅಂಗವಾಗಿ ಶನಿವಾರ ಆಯೋಜಿಸಲಾದ ಮೆರವಣಿಗೆ ಉತ್ಸವಕ್ಕೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಚಾಲನೆ ನೀಡಿದರು.
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಿಂದ ಥೆರ ಮೈದಾನದವರೆಗೆ ನಡೆದ ಈ ಮೆರವಣಿಗೆ ಉತ್ಸವದಲ್ಲಿ ಡೊಳ್ಳು ಕುಣಿತ, ವೀರಭದ್ರ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಪಟ್ಟಾ ಕುಣಿತ, ಹಲಗಿ ಕುಣಿತ, ಕೋಲಾಟ ಸೇರಿದಂತೆ ಹಲವಾರು ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಜರುಗಿತು. ಈ ಮೆರವಣಿಗೆಯು ನೋಡುಗರನ್ನು ಬೆರಗುಗೊಳ್ಳುವಂತೆ ಮಾಡಿತು.
ಈ ಮೆರವಣಿಗೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಬಸವಕಲ್ಯಾಣ ನಗರಸಭೆ ಅಧ್ಯಕ್ಷ ಶಹನಾಜ ತನ್ವಿರ್ ಶೇಖ್, ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಂ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ಪಶು ವೈದ್ಯಾಧಿಕಾರಿ ಗೌತಮ ಅರಳಿ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ, ಬಸವಕಲ್ಯಾಣ ತಹಶಿಲ್ದಾರ ಶಾಂತಗೌಡ ಬಿರಾದಾರ, ಹುಲಸೂರು ತಹಶಿಲ್ದಾರ ಶಿವಾನಂದ ಮೇತ್ರೆ ಹಾಗೂ ಅನೇಕ ಮಠಾಧೀಶರು, ವಿವಿಧ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಲಾ ತಂಡಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.