ಬೀದರ್: ಪ್ರಚಾರದ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಕುರಿತು ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯೋನು ಸಾಗರ್ ಖಂಡ್ರೆ.ಮನೆ ಹೆಣ್ಣು ಕೊಡಬೇಕಾದ್ರೆ, ಸ್ವಂತ ಬಲ ಇದ್ದೋನಿಗೆ ಹೆಣ್ಣು ಕೋಡ್ತೆವೆ.ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯೋನಿಗೆ ಯಾರಾದ್ರೂ ಹೆಣ್ಣು ಕೊಡ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.
ಹುಡಗುನ ತಂದೆ ಎಷ್ಟೇ ಆಗರ್ಭ ಶ್ರೀಮಂತ ನಾಗಿದ್ರೂ, ಹುಡುಗನಿಗೆ ಸ್ವಂತಬಲ ಇಲ್ಲದೆ ಇದ್ರು ಹೆಣ್ಣು ಕೊಡೊಲ್ಲಾ.ಅದೇ ರೀತಿ ಬೀದರ್ ಲೋಕಸಭೆಯಲ್ಲೂ ಸಾಗರ್ ಖಂಡ್ರೆ ಪರಿಸ್ಥಿತಿ ಇದೆ.ತಂದೆ ಹೆಸರ ಮೇಲೆ ಲೊಟಂಗಿ (ಲಾಗಾ) ಹೊಡೆಯುತ್ತಾರೆ, ಅಂತವರಿಗೆ ಯಾರೂ ಮತ ಹಾಕೋಲ್ಲಾ ಎಂದು ವ್ಯಂಗ್ಯವಾಡಿದ ಭಗವಂತ ಖೂಬಾ.
ನಾನು ಪಕ್ಷದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಸಂಸದನಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ.ಈಗ ಬಿಜೆಪಿ ಅಭ್ಯರ್ಥಿ ಆಗಿದ್ದೇನೆ, ಆದ್ರೆ ಸಾಗರ್ ಖಂಡ್ರೆ ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯುತ್ತಿದ್ದಾರೆ.ಎಂದು ಸಾಗರ್ ಖಂಡ್ರೆ ಹಾಗೂ ಈಶ್ವರ ಖಂಡ್ರೆ ವಿರುದ್ದ ಕಿಡಿ ಕಾರಿದ್ದಾರೆ.
ಈಶ್ವರ ಖಂಡ್ರೆ ಮಾತೇತ್ತಿದ್ರೆ, ಖೂಬಾ ಸಾಧನೆ ಶೂನ್ಯ ಅಂತಾರೆ. ನನ್ನ ಸಾಧನೆಯನ್ನ ನಾನು ಜನರ ಮುಂದೆ ಇಡ್ತೇನೆ. ಆದ್ರೆ ಬೀದರ್ ಜಿಲ್ಲೆಗೆ ಖಂಡ್ರೆ ಮನೆತನದ ಕೊಡುಗೆ ಏನು. ಕಳೆದ 65 ವರ್ಷಗಳಿಂದ ಭಾಲ್ಕಿ- ಬೀದರ್ನಲ್ಲಿ ಖಂಡ್ರೆ ಕುಟುಂಬದವರು ರಾಜಕೀಯ ಮಾಡ್ತಾ ಇದ್ದಾರೆ.ಏನು ಸಾಧನೆ ಮಾಡಿದ್ದಾರೆ, ಏನು ಕೊಡುಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೀದರ್ಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಖಂಡ್ರೆ ಕುಟುಂಬವೆ ಕಾರಣ. ಜನರ ಏಳಿಗೆಯನ್ನ ಖಂಡ್ರೆ ಕುಟುಂಬ ಯಾವತ್ತೂ ಬಯಸಿಲ್ಲಾ.ನನ್ನ ಸಾಧನಯನ್ನ ಜನರು ಹಾಗೂ ನಾಯಕರು ಮಾತಾಡ್ತಿದ್ದಾರೆ.ನೀವು ಕುರುಡು, ಕಿವುಡು, ಮೂಗ ಇರಬೇಕು, ಅದಕ್ಕೆ ನಮ್ಮ ಸಾಧನೆ ಕಂಡಿಲ್ಲಾ.ಖಂಡ್ರೆ ಕುಟಂಬದ ವಿರುದ್ದ ಕೇಂದ್ರ ಸಚಿವ ಬಿಜೆಪಿ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಕಿಡಕಾರಿದ್ದಾರೆ.