ಬೀದರ್: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸೆಪ್ಟೆಂಬರ್ 6ರಂದು ತಮ್ಮ ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಹೋಳ ಹಬ್ಬ ಆಚರಿಸಿದರು. ಗೋಮಾತೆಯನ್ನು ಬಹುವಾಗಿ ಮೆಚ್ಚುವ ಸಚಿವರು, ರೈತರ ಹಬ್ಬವೆಂದೇ ಪ್ರಸಿದ್ದಿ ಪಡೆದ ಹೋಳ ಹಬ್ಬದ ನಿಮಿತ್ತ ಎತ್ತುಗಳಿಗೆ ಭಕ್ತಿ ಭಾವದಿಂದ ಪೂಜೆಗೈದು ನೈವೆದ್ಯ ಸಮರ್ಪಿಸಿದರು.
ಈ ಹಬ್ಬಕ್ಕೆ ಸಚಿವರ ಕುಟುಂಬದ ಬಂಧುಗಳು ಮತ್ತು ರೈತ ಭಾಂದವರು ಸಾಕ್ಷಿಯಾದರು. ಈ ಹೋಳಾ ಹಬ್ಬದಂದು ರೈತರು ತಮ್ಮ ಎತ್ತುಗಳ ಮೈತೊಳೆದು, ಕೊಂಬುಗಳಿಗೆ ಬಣ್ಣ ಬಳಿದು ಸಿಂಗರಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಓಡಿಸುವುದು ವಾಡಿಕೆಯಾಗಿದೆ.