ಬೀದರ : ಇನ್ನು 20 ವರ್ಷ ರಾಜ್ಯ ಕೇಂದ್ರ ಎರಡರಲ್ಲೂ ನಮ್ಮದೇ ಸರ್ಕಾರ ಇರಲಿದ್ದು, ಕಾಂಗ್ರೆಸ್ನವರು ಎರಡು ದಶಕಗಳ ಕಾಲ ಅಧಿಕಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯಬೇಕಿದೆ ಎಂದು ರಾಜ್ಯದ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಪ್ರತಾಪನಗರದಲ್ಲಿನ ಘಾಳೆ ಪಂಕ್ಷನ್ ಹಾಲ್ನಲ್ಲಿ ಸೋಮವಾರ ಜರುಗಿದ ಕೇಂದ್ರ ಸರ್ಕಾರದ ನವಿಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಮಂತ್ರಿಯಾಗಿ ತವರು ಕ್ಷೇತ್ರ ಪ್ರಥಮ ಬಾರಿಗೆ ಬೀದರ್ಗೆ ಆಗಮಿಸಿದ ಭಗವಂತ ಖೂಬಾ ಅವರ ಜನಾಶಿರ್ವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಡಬಲ್ ಇಂಜಿನ್ ಸರ್ಕಾರವಿದ್ದು, ನಮ್ಮ ಜಿಲ್ಲೆಯಲ್ಲೂ ಈಗ ಡಬಲ್ ಮಂತ್ರಿಗಳ ಎಂಜಿನ್ ಇದೆ. ನಮ್ಮಲ್ಲಿರುವ ಸಣ್ಣ, ಪುಟ್ಟ ಮತಭೇದಗಳು ಮರೆತು 2023 ಹಾಗೂ 2024ರಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರ ತರಬೇಕಾಗಿದೆ ಎಂದರು.
ಕಾಂಗ್ರೆಸ್ ಗೆ ಇನ್ನು 20 ವರ್ಷ ಅಧಿಕಾರ ಸಿಗುವುದಿಲ್ಲ ; ಸಚಿವ ಪ್ರಭು ಚವ್ಹಾಣ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.