ಬೀದರ್ : ಬರೋಬ್ಬರಿ 15 ಲಕ್ಷ ರೂ.ಗಳ ಲಂಚ ಪಡೆಯುತ್ತಿರುವಾಗಲೇ ತಹಸೀಲ್ದಾರ್ ಒಬ್ಬರು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಬಲೆಗೆ ಬಿದ್ದಿರುವ ಪ್ರಸಂಗ ನಡೆದಿದೆ. ಸಿಕ್ಕಿ ಬಿದ್ದಿರುವ ತಹಸೀಲ್ದಾರ್ ಅವರನ್ನು ಬೀದರ್ನ ತಾಲ್ಲೂಕು ದಂಡಾಧಿಕಾರಿ ಗಂಗಾದೇವಿ ಎಂದು ಗುರುತಿಸಲಾಗಿದೆ.
ಗಂಗಾದೇವಿ ಅವರು ನಗರದ ಚಿದ್ರಿ ಸರ್ವೆ ನಂಬರ್ 15 ರ ಭೂಮಿಯನ್ನು ಖಾತೆ ಮಾಡಿಕೊಡಲು ಲೀಲಾಧರ್ ಪಟೇಲ್ ಎಂಬುವವರ ಬಳಿ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಲೀಲಾಧರ್ 15 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿದ್ದರಾದರೂ ತಹಸೀಲ್ದಾರ್ ಅವರು ಕಾನೂನು ಪ್ರಕಾರ ಕೆಲಸ ಮಾಡಿಕೊಡಲೂ ಅಪಾರ ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಆಕ್ರೋಶಿತರಾಗಿದ್ದರು. ಇದರಿಂದ ಅವರು ಎಸಿಬಿಗೆ ದೂರು ನೀಡಿದ್ದರು. ಬುಧವಾರ ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ತಹಸೀಲ್ದಾರ್ ಅವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹಲವು ಭ್ರಷ್ಟಾಚಾರದ ಆರೋಪ ಹೊತ್ತಿದ್ದ ತಹಸೀಲ್ದಾರ್ ಗಂಗಾದೇವಿ ಅವರ ಮನೆಗೆ ಎಸಿಬಿ ಎಸ್ಪಿ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಂಗಾದೇವಿ ಅವರು ಬೆಂಗಳೂರಿನವರಾಗಿದ್ದು ಒಂದು ವರ್ಷದಿಂದ ಬೀದರ್ ತಾಲೂಕು ತಾಲೂಕು ದಂಡಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಭ್ರಷ್ಟಾಚಾರದ ಅನೇಕ ಆರೋಪಗಳು ಇವೆ ಎಂದು ತಿಳಿದು ಬಂದಿದೆ.
15 ಲಕ್ಷ ರೂ ಲಂಚ ಪಡೆಯುವಾಗ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.