News Karnataka Kannada
Wednesday, May 01 2024
ದೆಹಲಿ

50 ರೂಪಾಯಿ ವಿಚಾರಕ್ಕೆ ಮಗುವನ್ನು ಕೊಂದಿದ್ದವನ ಬಂಧನ

Police
Photo Credit :

ದೆಹಲಿ: ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದಿದ್ದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಬಂದಿಸಿದ್ದಾರೆ. ಬಂದಿತನನ್ನು ನರೇಶ್(22) ಎಂದು ಗುರುತಿಸಲಾಗಿದೆ. ಈ ಘಟನೆ ಫೆಬ್ರವರಿಯಲ್ಲಿ ನಡೆದಿದ್ದು, ಆರು ತಿಂಗಳ ಬಳಿಕ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತಾನೇ ಮಗುವನ್ನು ಕೊಂದಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.
ನಿರುದ್ಯೋಗಿ ಆಗಿರುವ ಈತ ಫರಿದಾಬಾದ್‍ನ ನಿವಾಸಿ ಹಾಗೂ ಆತನೊಬ್ಬ ಮಾದಕ ವ್ಯಸನಿ ಎಂದು ಫರಿದಾಬಾದ್ ಪೊಲೀಸರು ತಿಳಿಸಿದ್ದಾರೆ. ಆತನಿಗೆ ಮಗುವಿನ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಆ ಮಗುವಿನ ತಂದೆಗೂ-ಈ ನರೇಶ್‍ಗೂ ಪದೇಪದೆ ಜಗಳವಾಗುತ್ತಿತ್ತು. ಹಾಗೇ ಒಂದು ದಿನ ನರೇಶ್ ತನ್ನ ಪಕ್ಕದ ಮನೆಯವರೊಬ್ಬರ 8ವರ್ಷದ ಮಗಳ ಕೈಯಿಂದ 50 ರೂಪಾಯಿ ಕಸಿದಿದ್ದ. ಅದನ್ನು ನೋಡಿದ್ದ 18 ತಿಂಗಳ ಮಗುವಿನ ತಂದೆ, ನರೇಶ್ ಜತೆ ಜಗಳ ತೆಗೆದು, ಆತ ಮಾಡಿದ ಕೆಲಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಅದಾದ ಮೇಲೆ ನರೇಶ್ ಹೇಗಾದರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಂದು ಸುಬೆ ಸಿಂಗ್ ವಿವರಿಸಿದ್ದಾರೆ.
ಫೆಬ್ರವರಿ 5ರಂದು ನರೇಶ್ ಆ 18 ತಿಂಗಳ ಗಂಡು ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದು ಕಂಡು ಬಂತು. ಆತನನ್ನು ಎತ್ತಿಕೊಂಡು ತನ್ನ ಫ್ಲ್ಯಾಟ್‍ಗೆ ಕರೆದುಕೊಂಡು ಹೋದ. ನಂತರ ಮಗುವನ್ನು ದೊಡ್ಡದಾದ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ಯಾರಿಗೂ ಗೊತ್ತಾಗಬಾರದು ಎಂದು ಅದರ ಬಾಯಿಯನ್ನು ಮುಚ್ಚಿದ್ದ. ಮಗುವಿನ ಜೀವ ಹೋಯಿತು. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದ್ದರು. ಅತ್ತ ನರೇಶ್, ಮಗುವನ್ನು ಹತ್ಯೆ ಮಾಡಿದ ತಕ್ಷಣ ತನ್ನ ಸ್ಥಳ ಬದಲಾಯಿಸಿದ್ದ. ಆದರೆ ಆರು ತಿಂಗಳ ನಂತರ ಆತನನ್ನು ಹಿಡಿಯಲಾಗಿದೆ. ಮಗುವಿನ ಕುತ್ತಿಗೆಯಿಂದ ಆತ ಕದ್ದಿದ್ದ ತಾಯತವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಪಿಆರ್‌ಒ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು