ತುಮಕೂರು: ತಿಪಟೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಬಿದರೆಗುಡಿ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ದಲಿತ ಯುವಕರ ಮೇಲೆ ಮಾರಾಣಾಂತಿಕ ಹಲ್ಲೇ ನಡೆಸಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ಜಿಲ್ಲೆಯ ತಿಪಟೂರು ತಾಲೂಕಿನ ಕಸಬಾ ಹೋಬಳಿ ಪ್ರಸಿದ್ದ ಯಾತ್ರಕ್ಷೇತ್ರವಾದ ಹಾಗೂ 64ಹಳ್ಳಿ ನಾಡದೇವತೆ ಶ್ರೀ ಬಿದಿರಾಂಬಿಕ ದೇವಿ ದೇವಾಲಯದಲ್ಲಿ ದೇವಾಲಯ ಅಸ್ಪೃಷ್ಯತೆ ಆಚರಣೆ ನಡೆದಿದ್ದು, ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿದಿರೆಗುಡಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಅರ್ಚಕ ಸುಮಾರು 30ವರ್ಷ ವಯಸ್ಸಿನ ಲಿಂಗರಾಜು ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ.
ಹಲವಾರು ವರ್ಷಗಳಿಂದ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆ ಮಾಡಲಾಗುತ್ತಿದ್ದು,ದೇವಾಲಯದಲ್ಲಿ ದಲಿತರಿಗೆ ಪೂಜೆ ನಿರಾಕರಿಸಲಾಗುತ್ತಿದೆ ಎಂದು ಎಸಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಅನೇಕ ದೂರುಗಳನ್ನ ಸಹ ಸ್ಥಳೀಯ ದಲಿತರು ನೀಡಿದ್ದರು ಎನ್ನಲಾಗಿದೆ. ಆದರೆ ಕಳೆದ ವರ್ಷ ಶ್ರೀಬಿದಿರಮ್ಮ ದೇವಿ ಉತ್ಸವ ಮೂರ್ತಿ,ಶ್ರೀ ಚಿಕ್ಕಮ್ಮ ದೇವಿ ದೇವಾಲಯದ ಬಳಿ ಬಂದಾಗ ಚಿಕ್ಕಮ್ಮ ದೇವಿ ಅರ್ಚಕ ಈಡುಗಾಯಿ ಹಾಕಿದ್ದಾನೆ.ಈ ವಿಚಾರವಾಗಿ ದಲಿತರು ಈಡುಗಾಯಿಹಾಕುವಂತಿಲ್ಲ ನೀನು ಈಡುಗಾಯಿ ಹಾಕಿ ಮೈಲಿಗೆ ಮಾಡಿದ್ದೀಯ ಎಂದು ಗಲಾಟೆ ಮಾಡಲಾಗಿದೆ . ಈ ವಿಚಾರವಾಗಿ ಪೊಲೀಸ್ ಇಲಾಖೆ ಮಧ್ಯಪ್ರವೇಶದಿಂದ ಪರಿಸ್ಥಿತಿ ಸುದಾರಿಸಿದ್ದು, ಇದೇ ಜಿದ್ದಿಗೆ ಬಿದ್ದ ವ್ಯಕ್ತಿಗಳು ದೊಡ್ಡಮ್ಮದೇವಿ ಧರ್ಮದರ್ಶಿಗಳಿಗೆ ಮಾಹಿತಿ ನೀಡದೆ ,ಚಿಕ್ಕಮ್ಮ ದೇವರಪೀಠ ಮಾಡಿಸಲಾಗಿದೆ ಎಂದು ಆರೋಪಿಸಿ ಸುಮಾರು 20 ಜನರ ಗುಂಪು ಲಿಂಗರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಳು ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು,ಹೊನ್ನವಳ್ಳಿ ಪೋಲಿಸ್ ಠಾಣೆಯ ಹಾಗೂ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.