News Karnataka Kannada
Sunday, April 28 2024
ತುಮಕೂರು

ತುಮಕೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಚುನಾವಣಾ ರಾಯಭಾರಿಗಳ ನೇಮಕ

Tumakuru: Election envoys appointed
Photo Credit : News Kannada

ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ವತಿಯಿಂದ ರಾಯಭಾರಿಗಳ ಆಯ್ಕೆ ಸಭೆ ಹಾಗೂ ವಿಶೇಷಚೇತನರು ತೃತೀಯ ಲಿಂಗಿಗಳ ಜಾಗೃತ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು, ಮಾತನಾಡಿ, ರಾಯಭಾರಿಗಳನ್ನು ಆಯ್ಕೆ ಮಾಡುವಾಗ ಒತ್ತಡಕ್ಕೆ ಒಳಗಾಗದಿದ್ದರೆ ಒಳ್ಳೊಳ್ಳೆ ರತ್ನ ರಾಯಭಾರಿ ಗಳನ್ನು ಆಯ್ಕೆ ಮಾಡಬಹುದು. ಇದಕ್ಕೆ ಜಿಲ್ಲೆಯಿಂದ ಈ ಬಾರಿ ಉತ್ತಮ ವ್ಯಕ್ತಿ ಗಳನ್ನು ಆಯ್ಕೆ ಮಾಡಿರುವುದೇ ನಿದರ್ಶನ ಎಂದರು.

ಜಿಲ್ಲೆಯಿಂದ ಈ ಬಾರಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಕಲಾಶ್ರೀ ಲಕ್ಷ್ಮಣ ದಾಸ್, ದೂರದರ್ಶನ ಕಲಾವಿದ ಕಂಬಂದರಂಗಯ್ಯ, ಗಾಯಕ ಮೋಹನ್ ಕುಮಾರ್, ಲಿಲ್ಲಿ, ಮಂಜಮ್ಮ ರತ್ನಮ್ಮ ಅವರನ್ನು ಮತದಾನ ಜಾಗೃತಿ ರಾಯಭಾರಿ ಗಳಾಗಿ ಆಯ್ಕೆ ಮಾಡಲಾಗಿದ್ದು, ಇವರೆಲ್ಲ ತಮ್ಮ ತಮ್ಮ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದವರು. ಇವರ ಪ್ರೇರಣೆ, ಸ್ಫೂರ್ತಿಯಿಂದ ಜಿಲ್ಲೆಯಲ್ಲಿ ಈ ಬಾರಿ ಅತ್ಯಧಿಕ ಮತದಾನ ದಾಖಲಾಗಬೇಕೆಂದು ಆಶಿಸುವುದಾಗಿ ತಿಳಿಸಿದರು.

ಮತದಾನ ಹಬ್ಬದಂತೆ ಆಚರಣೆಯಾಗಬೇಕು. ಪ್ರತಿಯೊಬ್ಬರು ಮತಗಟ್ಟೆ ಗೆ ಬಂದು ಮತ ಚಲಾಯಿಸಬೇಕು. ತೀರಾ ಅಶಕ್ತರಿಗೆ ಮಾತ್ರ ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿದೆ. ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕುಸಿಯುತ್ತಿದ್ದು ವಿದ್ಯಾವಂತರೇ ಮತದಾನದಿಂದ ಹೊರಗುಳಿಯುತ್ತಿರುವುದು ದುರಂತ ಎಂದರು. ಜಿಪಂ ಸಿಇಓ ಡಾ. ವಿದ್ಯಾಕುಮಾರಿ ಅವರು ಮಾತನಾಡಿ ಸ್ವೀಪ್ ಸಮಿತಿಯಿಂದ ಪ್ರತೀ ಗ್ರಾಮ ಮಟ್ಟದಲ್ಲೂ ಮತದಾನ ಜಾಗೃತಿ ಮಾಡುತ್ತಿದ್ದು, ಸಾಮಾಜಿಕ ಸೇವೆ ಮಾಡಿದವರು, ಸಾಂಸ್ಕೃತಿಕ ದಿಗ್ಗಜರು, ತೃತೀಯ ಲಿಂಗಿಗಳು, ವಿಶೇಷ ಚೇತನರ ಪ್ರತಿನಿಧಿಗಳನ್ನು ರಾಯಭಾರಿ ಯಾಗಿಸಿಕೊಂಡಿರುವುದು ಮತದಾನ ಜಾಗೃತಿಗೆ ಬಲ ನೀಡಿದೆ ಎಂದರು.

ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ಸಿಎಓ ನರಸಿಂಹ ಮೂರ್ತಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀ ಧರ್, ರಮೇಶ್, ಸ್ವೀಪ್ ಸಮಿತಿ ಶ್ರೀ ನಿವಾಸ್, ಜಾಹ್ನವಿ , ಇತರ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು