ತುಮಕೂರು: ತುಮಕೂರು ನಗರ ಬಿ.ಜಿ.ಎಸ್. ವೃತ್ತದಲ್ಲಿ ಸಿದ್ಧರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಗಳಾಗುತ್ತಿರುವ ಹಿನ್ನಲೆಯಲ್ಲಿ ತುಮಕೂರಿನ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ಬೆಂಬಲಿಗರಿಂದ ಸಂಭ್ರಮಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಟ್ಟಿಕಾ ಬಾಬು (ಬೊಮ್ಮನಹಳ್ಳಿ ಬಾಬು) ಅಭಿಮಾನಿ ಬಳಗದವರು ಪಟಾಕಿ ಸಿಡಿಸಿ, ಸಿಹಿ ಹಂಚಿದ್ದಲ್ಲದೆ, ಅಲ್ಲಿ ನೆರದಿದ್ದ ಜನರಿಗೆ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಅಟ್ಟಿಕಾ ಬಾಬು ಅವರು ತುಮಕೂರು ಜಿಲ್ಲಾ ಜನತೆಯೊಂದಿಗೆ ಸದಾಕಾಲವಿರುತ್ತಾರೆಂದು ಅವರ ಅಭಿಮಾನಿಯೊಬ್ಬರು ಹೇಳಿದರು.
ತುಮಕೂರು ಜಿಲ್ಲಾ ರಾಜಕಾರಣಕ್ಕೆ ಅಟ್ಟಿಕಾ ಬಾಬು ಅವರ ಅವಶ್ಯಕತೆಯಿದ್ದು ಮುಂಬರುವ ದಿನಗಳಲ್ಲಿ ತುಮಕೂರಿನ ಸಕ್ರೀಯ ರಾಜಕಾರಣದಲ್ಲಿ ಅವರು ಇರುತ್ತಾರೆಂದು ಹೇಳಿದರು. ಈ ಸಂದರ್ಭದಲ್ಲಿ ಅಟ್ಟಿಕಾ ಬಾಬು ಅಭಿಮಾನಿಗಳದ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.