ತುಮಕೂರು: ನಗರದ ಅಮರಜ್ಯೋತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಭವನಕ್ಕೆ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಸಿದ್ದರಬೆಟ್ಟರ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಂಸದ ಜಿ.ಎಸ್.ಬಸವರಾಜ್, ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ ಪಟೇಲ್, ಪ್ರಭು ಬಾಳಯ್ಯ, ಅತ್ತಿರೇಣುಕಾನಂದ, ಟಿ.ಆರ್.ಸದಾಶಿವಯ್ಯ, ರಕ್ಷಿತ್, ಶಿವರುದ್ರಯ್ಯ, ಜೈಭಾರತ್ ಹರೀಶ್ ಸೇರಿ ಸಮಾಜದ ಪ್ರಮುಖರಿದ್ದರು.