News Karnataka Kannada
Saturday, May 04 2024
ತುಮಕೂರು

ಚಿರತೆ ದಾಳಿಗೆ ಕುರಿ ಬಲಿ: ಜವರೇಗೌಡನಪಾಳ್ಯ ಗ್ರಾಮಸ್ಥರಲ್ಲಿ ಆತಂಕ

Sheep killed in leopard attack: Villagers of Javaregowdanapalya are worried.
Photo Credit : News Kannada

ತುಮಕೂರು: ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ ಒಂದು ಕುರಿ ಹೊತ್ತೊಯ್ದು ಹೊರ ವಲಯದಲ್ಲಿ ಅರೆಬರೆ ತಿಂದು ಬಿಟ್ಟು ಹೋದ ಘಟನೆ ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜವರೇಗೌಡನಪಾಳ್ಯ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಕೋಟಪ್ಪ ಎಂಬ ರೈತರಿಗೆ ಸೇರಿದ ಕೊಟ್ಟಿಗೆ ಮನೆಗೆ ನಸುಕಿನಲ್ಲಿ ವೇಳೆ ನುಗ್ಗಿದ ಚಿರತೆ ಅಲ್ಲಿದ್ದ ನಾಲ್ಕು ಕುರಿಗಳ ಪೈಕಿ ಒಂದು ಕುರಿಯನ್ನು ಕ್ಷಣಾರ್ಧದಲ್ಲಿ ಹೊತ್ತು ಮನೆಯಿಂದ ಸುಮಾರು 300 ಮೀಟರ್ ದೂರ ತೆರಳಿ ತಿಂದು ತನ್ನ ಹಸಿವು ನೀಗಿಸಿಕೊಂಡು ಅರೆಬರೆ ಕಳೇಬರ ಬಿಟ್ಟು ಕಣ್ಮರೆಯಾಗಿದೆ.

ಸುಮಾರು 20 ಸಾವಿರ ಬೆಲೆಯ ಕುರಿ ಬಲಿಯಿಂದ ಕೋಟಪ್ಪ ಅವರಿಗೆ ನಷ್ಟವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಚಿರತೆ ಸುಳಿವು ಪತ್ತೆಗೆ ಮುಂದಾದರು. ಈ ಭಾಗದಲ್ಲಿ ಈಗಾಗಲೇ ಮೂರು ಚಿರತೆ ಸೆರೆಯಾಗಿದ್ದು, ಇನ್ನೂ ಚಿರತೆಗಳು ಇವೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹಾವಳಿ ನೀಡುವ ಚಿರತೆ ಮಕ್ಕಳ ಮೆಲೇರೆಗುವ ಮುನ್ನ ಕ್ರಮವಹಿಸಿ ಚಿರತೆ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು