ತುಮಕೂರು: ಈ ಬಾರಿ ಹಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಅವರನ್ನು ಗೆಲ್ಲಲಿಸದಿದ್ದರೆ ನಾನು ಯಾರಿಗೂ ಮುಖವನ್ನೇ ತೋರಿಸಲ್ಲ ಎಂದು ಹಾಸನದ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಅವರಿಗೆ ಚಾಲೆಂಜ್ ಮಾಡಿದ್ದಾರೆ.
ತುಮಕೂರಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವೆಗೌಡರು ಜಾತ್ಯಾತೀತರಲ್ಲ, ಮೋದಿ ಗೆದ್ದರೆ ನಾನು ದೇಶ ಬಿಡುತ್ತೇನೆ ಎಂದವರು ಈಗ ಎನ್ ಮಾಡಿದ್ದಾರೆ. ತಮ್ಮ ಕುಟುಂಬವನ್ನು ಮಾತ್ರ ಕಣಕ್ಕಿಳಿಸುತ್ತಿದ್ದಾರೆ ಹಾಗದರೆ ಜೆಡಿಎಸ್ ನಲ್ಲಿ ಬೇರೆ ಯಾರು ಅಭ್ಯರ್ಥಿಯೇ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಈ ಬಾರಿ ಪುಟ್ಟಸ್ವಾಮಿ ಗೌಡರ ಮೊಮ್ಮಗ ನಮ್ಮ ಪಕ್ಷದಿಂದ ನಿಲ್ಲುತಿದ್ದಾರೆ.ಕಳೆದ ಬಾರಿ ಪುಟ್ಟಸ್ವಾಮಿ ವಿರುದ್ದ ದೇವೆಗೌಡರು ನಿಂತು ಸೋತಿದ್ದರು ಹಾಗಾಗಿ ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸದಿದ್ದರೆ ನಾನು ಯಾರಿಗೂ ಮುಖ ತೋರಿಸಲ್ಲ ಎಂದು ದೇವಗೌಡರಿಗೆ ಸವಾಲ್ ಹಾಕಿ ಮಾತನಾಡಿದ್ದಾರೆ.