News Karnataka Kannada
Friday, May 03 2024
ಬೆಂಗಳೂರು

ಖರ್ಗೆ ಮನುವಾದಿ ರಾಜಕಾರಣಿ ಅವರನ್ನು ತಿರಸ್ಕರಿಸಿ ಎಂದ ನಟ ಚೇತನ್‌

New Project 2023 12 24t174117.341
Photo Credit : News Kannada

ಬೆಂಗಳೂರು: ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ತಿರಸ್ಕರಿಸಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಅವರು, ‘ನಮ್ಮ ಸಮಾನತೆಯ ಚಳುವಳಿಗೆ ಐಡೆಂಟಿಟೇರಿಯನಿಸಮ್ (ಸ್ವ-ಭಾಷೆ/ ಸ್ವ-ಜಾತಿ/ ಸ್ವ-ಧರ್ಮ/ಸ್ವ-ಲಿಂಗ ಪ್ರೇಮ ಇತ್ಯಾದಿ) ಪ್ರಮುಖ ಅಪಾಯವಾಗಿದೆ. ಅಭ್ಯರ್ಥಿಯು ನಮ್ಮಂತೆಯೇ ಜಾತಿ/ ಧರ್ಮ/ಭಾಷೆ/ ಲಿಂಗದಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸಬಾರದು. ನಾವು ಸಿದ್ದಾಂತದ ಆಧಾರದ ಮೇಲೆ ಬೆಂಬಲಿಸಬೇಕು. ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು.

ಮಲ್ಲಿಕಾರ್ಜುನ ಖರ್ಗೆ ದಲಿತರಾಗಿರಬಹುದು (ಆಕಸ್ಮತ್ತಾಗಿ).. ಆದರೆ, ಅವರು ಕಾಂಗ್ರೆಸ್ಸಿಗರು, ಮನುವಾದಿ, ಆಯ್ಕೆಯಿಂದ ಖರ್ಗೆ ಸಮಾನತಾವಾದಿಯಲ್ಲ. ಆದ್ದರಿಂದ ಅವರು ನಮ್ಮಲ್ಲಿ ಒಬ್ಬರಲ್ಲ. ಮಾನ್ಯವರ್ ಕಾನ್ಶೀರಾಮ್ ಅವರು ತಮ್ಮ ‘ಚಮಚಾಯುಗ’ ಪುಸ್ತಕದಲ್ಲಿ ವೈಯಕ್ತಿಕ ಬೆಳವಣಿಗೆಗಾಗಿ ಎಷ್ಟೋ ಬಹುಜನರು ಬ್ರಾಹ್ಮಣ್ಯದ ಕೈವಾಡಗಳ ಬಗ್ಗೆ ಬರೆದಿದ್ದಾರೆ. ಖರ್ಗೆ ಪ್ರಧಾನಿಯಾದರೆ ಪರಿವರ್ತನೆ ತರುತ್ತಾರಾ’ ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಂದೆಡೆ ಸರಣಿ ಪೋಸ್ಟ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನೂ ವಿರೋಧ ಮಾಡಿರುವ ಚೇತನ್ ಅಹಿಂಸಾ ಅವರು, ಇಂದು ರೈತರ ದಿನದಂದು, 2020 ರಲ್ಲಿ ಬಿಜೆಪಿ ತಂದಿರುವ ರೈತ ವಿರೋಧಿ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ನಾವು ಸಮಾನತಾವಾದಿಗಳು ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕಿರುವುದು ಒಳ್ಳೆಯದು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ವಿರೋಧಿ ಕಾಯ್ದೆ ಎರಡನ್ನೂ ರದ್ದುಗೊಳಿಸಬೇಕು. (ಭೂ ಸುಧಾರಣಾ ಕಾಯ್ದೆಯು ಕಾರ್ಪೊರೇಟ್‌ಗಳು ಮತ್ತು ಶ್ರೀಮಂತ ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ರೈತರ ಭೂಮಿಯನ್ನು ಕಸಿದುಕೊಂಡಿತು. ಗೋಹತ್ಯೆ ವಿರೋಧಿ ಕಾಯ್ದೆಯು ಗೋಹತ್ಯೆಗಾಗಿ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿತು) ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

‘ಸಿಎಂ ಸಿದ್ದರಾಮಯ್ಯ ಸಮವಸ್ತ್ರದಲ್ಲಿ ಹಿಜಾಬ್ ಹಾಕಿರುವುದು ಧಾರ್ಮಿಕ ಓಲೈಕೆ. ಸಿದ್ದರಾಮಯ್ಯನವರು ಮಾಡಬೇಕಾಗಿರುವುದು ಸಮವಸ್ತ್ರದಲ್ಲಿ ಬೇಡವಾದದ್ದನ್ನು ವಿಸ್ತರಿಸುವುದು. ಹಿಜಾಬ್, ಬಿಂದಿ/ತಿಲಕ/ ಪೇಟ/ಇಷ್ಟಲಿಂಗ/ಕ್ರಾಸ್/ಜನಿವಾರ/ಹೂಗಳು/ಎಲ್ಲಾ ಧಾರ್ಮಿಕ-ಸಾಂಸ್ಕೃತಿಕ ಗುರುತುಗಳು. ಸಮವಸ್ತ್ರದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.

ಪೆರಿಯಾರ್‌ ನೆನದ ನಟ ಚೇತನ್: ‘ಈ ದಿನಾಂಕದಂದು(ಡಿ.24) 50 ವರ್ಷಗಳ ಹಿಂದೆ, ತಂದೆ ಪೆರಿಯಾರ್ ನಿಧನರಾದರು (1973). ಪೆರಿಯಾರ್ 15 ವರ್ಷಗಳಲ್ಲಿ 23 ಬಾರಿ ಜೈಲಿಗೆ ಹೋಗಿದ್ದರು. ಮತ್ತು ಅವರ ಸ್ವಂತ ಹೇಳಿಕೆಯಿಂದ ಒಟ್ಟು 80 ಬಾರಿ ಜೈಲಿಗೆ ಹೋಗಿದ್ದರು. ತಂದೆ ಪೆರಿಯಾರ್ ಅವರಂತೆ ಜೈಲಿಗೆ ಹೋಗಲು ನಾವು ಸಿದ್ಧರಾಗಿರಬೇಕು. ಕಾನೂನನ್ನು ಉಲ್ಲಂಘಿಸುವ ಮೂಲಕ ಅಲ್ಲ, ಅಧಿಕಾರಕ್ಕೆ ಸತ್ಯವನ್ನು ಹೇಳುವ ಮೂಲಕ ‘ನೀವು ಕ್ರಾಂತಿಕಾರಿಯನ್ನು ಜೈಲಿಗಟ್ಟಬಹುದು; ಆದರೆ ನೀವು ಎಂದಿಗೂ ಕ್ರಾಂತಿಯನ್ನು ಜೈಲಿಗಟ್ಟಲು ಸಾಧ್ಯವಿಲ್ಲ’ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು