News Karnataka Kannada
Monday, May 06 2024
ರಾಮನಗರ

ರಾಮನಗರ: ರೇಷ್ಮೆ ಗೂಡಿಗೆ ಬಂಪರ್ ಧಾರಣೆ

Bumper for cocoon
Photo Credit : By Author

ರಾಮನಗರ: ಅತಿವೃಷ್ಟಿ ಹಾಗೂ ಚಳಿಯಿಂದಾಗಿ ರೇಷ್ಮೆಗೂಡು ಉತ್ಪಾದನೆ ಕುಂಠಿತವಾಗಿರುವುದರಿಂದ ಗೂಡಿನ ಧಾರಣೆ ಏರಿಕೆಯಾಗುತ್ತಿದ್ದು,ರೇಷ್ಮೆ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೆ.ಜಿ.ಗೆ ಸುಮಾರು 865 ರೂ ದರ ದೊರೆಯುತ್ತಿದ್ದು, ಕಳೆದ ಎರಡು  ವರ್ಷದಿಂದ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ಸಾಕಷ್ಟು ರೈತರು ಮತ್ತೆ ರೇಷ್ಮೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ರಾಮನಗರ ಮಾರುಕಟ್ಟೆ ಒಂದರಲ್ಲಿಯೇ 86 ಸಾವಿರ ರೈತರು ನೋಂದಾಯಿಸಿಕೊಂಡಿದ್ದು, ರಾಜ್ಯ-ಹೊರ ರಾಜ್ಯಗಳಿಂದ ಗೂಡು ಬರುತ್ತಿದೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೇಷ್ಮೆ ಕೃಷಿಗೂ ಹೊಡೆತ ಬಿದ್ದಿದೆ.ಸಾಕಷ್ಟು ಕಡೆಗಳಲ್ಲಿ ಹಿಪ್ಪುನೇರಳೆ ತೋಟಗಳಿಗೆ ಹಾನಿಯಾಗಿದೆ. ಈಗ ಚಳಿಗಾಲವೂ ಆರಂಭ ಆಗಿದ್ದು, ಸೊಪ್ಪು ಹಾಗೂ ಗೂಡು ಉತ್ಪಾದನೆ ಸಹಜವಾಗಿಯೇ ಕುಸಿತ ಕಾಣುತ್ತಿದೆ. ಇನ್ನೂ ಕೆಲವು ತಿಂಗಳು ಕಾಲ ಇದೇ ಪರಿಸ್ಥಿತಿ  ಇರಲಿದ್ದು, ಗೂಡಿನ ಧಾರಣೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆಯ ಅಧಿಕಾರಿಗಳು.

ಕೆಲವು ವರ್ಷಗಳ ಹಿಂದಷ್ಟೇ ರಾಮನಗರ ಮಾರುಕಟ್ಟೆಗೆ ನಿತ್ಯ ಸರಾಸರಿ 60-70 ಟನ್ ನಷ್ಟು ಗೂಡು ಬರುತ್ತಿತ್ತು. ಆದರೆ ಸದ್ಯ ಈ ಪ್ರಮಾಣ 30ರಿಂದ35 ಟನ್  ಗಳಿಗೆ ಇಳಿಕೆ ಆಗಿದೆ. ಅದರಲ್ಲೂ ಸ್ಥಳೀಯವಾಗಿ ಬೆಳೆಯುವ ಮಿಶ್ರ ತಳಿಯ ಗೂಡಿನ ಪ್ರಮಾಣ ತೀವ್ರ ಕುಸಿದಿದೆ. ಹೀಗಾಗಿ ಇದರ ಬೆಲೆಯೂ ಏರಿಕೆ ಕಾಣತೊಡಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು