ರಾಮನಗರ: ದರ್ಗಾದಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಆಘಾತಕಾರಿ ಘಟನೆ ರಾಮನಗರದ ಎಂ.ಜಿ ರಸ್ತೆಯಲ್ಲಿರೋ ಪಿಎಸ್ವಿ ದರ್ಗಾದಲ್ಲಿ ನಡೆದಿದೆ. ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದವರನ್ನ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.
ಪಿಎಸ್ವಿ ದರ್ಗಾದಲ್ಲಿ ಗಂಧಮಹೋತ್ಸವದ ವೇಳೆ ಬೆಲ್ಲದಿಂದ ಮಾಡಿದ್ದ ಸಿಹಿ ಪ್ರಸಾದವನ್ನು ಹಂಚಲಾಗಿತ್ತು. ಇಂದು ಮಧ್ಯಾಹ್ನ ಈ ಪ್ರಸಾದವನ್ನು 70ಕ್ಕೂ ಹೆಚ್ಚು ಮಂದಿ ಸ್ವೀಕರಿಸಿದ್ದರು. ಪ್ರಸಾದ ಸ್ವೀಕರಿಸಿದವರಲ್ಲಿ ಹಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ರಾಮನಗರ ಟೌನ್ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.