ಕಾರವಾರ: ಸತತ ಮಳೆಯಿಂದಾಗಿ ನಗರದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಸುರಂಗ ದ್ವಾರದ ಮೇಲ್ಭಾಗದಲ್ಲಿ ಮಣ್ಣು ಕುಸಿಯುವ ಅಪಾಯ ಇರುವ ಹಿನ್ನೆಲೆಯಲ್ಲಿ ಮಣ್ಣು ತೆರವುಗೊಳಿಸಲಾಯಿತು.
ಕಾರವಾರದಿಂದ ಅಂಕೋಲಾ ಕಡೆಗೆ ಹೋಗುವ ಎರಡನೇ ಸುರಂಗದ ಮೇಲ್ಭಾಗದಲ್ಲಿ ಮಣ್ಣು ಸಡಿಲಗೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚುತಷ್ಪಥ ಗುತ್ತಿಗೆ ಪಡೆದಿರುವ ಐ ಆರ್ ಬಿ ಕಂಪೆನಿಯವರು ಸಡಿಲಗೊಂಡಿರುವ ಮಣ್ಣನ್ನು ತೆರವು ಮಾಡಿದರು. ತೆರವು ಮಾಡುವ ಸಂದರ್ಭದಲ್ಲಿ ಸುರಂಗದೊಳಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕಾರ್ಯಾಚರಣೆ ಮುಗಿದ ಬಳಿಕ ಸುರಂಗದೊಳಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.