ಬೆಂಗಳೂರು: ಬೆಂಗಳೂರು ನಗರದಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರ ರಾತ್ರಿಯಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು, ವಸತಿ ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಗೋಡೆ ಕುಸಿತಕ್ಕೂ ಕಾರಣವಾಗಿದೆ.
ರಾಜ್ಯ ರಾಜಧಾನಿಯಲ್ಲಿ ಮೂರು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂಜಾನೆಯವರೆಗೂ ನಗರದಲ್ಲಿ ಭಾರಿ ಮಳೆ ಸುರಿಯುತ್ತಲೇ ಇತ್ತು.
ಜೆಡಿಎಸ್ ಪಕ್ಷದ ಕಚೇರಿ ಬಳಿ ಬಿಎಂಆರ್ ಸಿಎಲ್ ನಿರ್ಮಾಣ ಸ್ಥಳದ ಬಳಿ ನಿರ್ಮಿಸಿದ್ದ ಗೋಡೆ ಕುಸಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಏಳು ಕಾರುಗಳು ಮತ್ತು ಎರಡು ಬೈಕ್ ಗಳು ಜಖಂಗೊಂಡಿವೆ.
ಮಳೆಯಿಂದಾಗಿ ಇಂದಿರಾನಗರ 2ನೇ ಹಂತ, ಇಂದಿರಾನಗರದ ಎಚ್ ಎಎಲ್ ಲೇಔಟ್ ಮತ್ತು ಎಚ್ಎಸ್ಆರ್ ಲೇಔಟ್ನ ವಸತಿ ಪ್ರದೇಶಗಳು ಜಲಾವೃತಗೊಂಡಿವೆ.
ಮಳೆನೀರು ಮನೆಗಳ ಮುಂದೆ ನಿಲ್ಲಿಸಿದ್ದ ಬೈಕುಗಳು ಮತ್ತು ಕಾರುಗಳನ್ನು ಮುಳುಗಿಸಿತ್ತು. ಅನೇಕ ಸ್ಥಳಗಳಲ್ಲಿನ ನಿವಾಸಿಗಳು ತಮ್ಮ ಮನೆಗಳಿಗೆ ನೀರು ಪ್ರವೇಶಿಸಿದ್ದರಿಂದ ತೀವ್ರ ಅನಾನುಕೂಲತೆಯನ್ನು ಅನುಭವಿಸಿದ್ದಾರೆ.
ಶಾಂತಿನಗರ, ಜಯನಗರ, ವಿಜಯನಗರ, ಮೈಸೂರು ರಸ್ತೆ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ರಾಜಾಜಿನಗರ, ಕೆಂಗೇರಿ, ಉತ್ತರಹಳ್ಳಿ, ಯಲಹಂಕ, ಹೆಬ್ಬಾಳ ಪ್ರದೇಶಗಳು ಮಳೆಯಿಂದ ಹೆಚ್ಚು ಹಾನಿಗೀಡಾಗಿವೆ. ಮಹದೇವಪುರ ಮತ್ತು ಬೆಂಗಳೂರು ಪೂರ್ವದಲ್ಲಿ ಇತ್ತೀಚೆಗೆ 60 ರಿಂದ 80 ಮಿ.ಮೀ ಮಳೆಯಾಗಿದೆ.