News Karnataka Kannada
Sunday, May 05 2024
ರಾಮನಗರ

ರಾಮನಗರದಲ್ಲಿ ಯುಗಾದಿಗೆ ಸಕಲ ಸಿದ್ಧತೆ

Ramnagar
Photo Credit :

ರಾಮನಗರ: ಶ್ರೀ ಶುಭಕೃತು ಸಂವತ್ಸರ ಆರಂಭ, ಅಸಂಖ್ಯಾತ ಹಿಂದೂಗಳ ಹೊಸ ವರ್ಷಾಚರಣೆ, ಚೈತ್ರ ಮಾಸದ ಮೊದಲನೇ ದಿನದ ಯುಗಾದಿ ಹಬ್ಬದಾಚರಣೆಗೆ ಜಿಲ್ಲೆಯ ಜನತೆ ಸಕಲ ಸಿದ್ಧತೆ ನಡೆಸಿದ್ದು ಎಲ್ಲೆಡೆ ಬೇವು, ಬೆಲ್ಲ ಸೇರಿದಂತೆ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಈ ಬಾರಿಯ ಯುಗಾದಿ ಹಬ್ಬದಲ್ಲಿ ಬೆಲೆ ಏರಿಕೆಯ ಬಿಸಿ ಜನರಲ್ಲಿ ಹಬ್ಬದ ಹುಮ್ಮಸ್ಸನ್ನೆ ಕಸಿದುಕೊಂಡಿದೆ.

ಕೆ.ಜಿ.ಬೆಲ್ಲದ ಬೆಲೆ 50 ರಿಂದ 60 ರೂಗಳಿಗೆ ಏರಿಕೆಯಾಗಿದೆ. ಹೂವು ಮತ್ತು ಹಣ್ಣಿನ ಬೆಲೆ ಗಗನಕ್ಕೇರಿದೆ.  ಹಬ್ಬದ ಪದಾರ್ಥಗಳು ಅಂಗಡಿಯಲ್ಲಿ ಮಾತ್ರವಲ್ಲದೇ ರಸ್ತೆಯ ಇಕ್ಕೆಲಗಳನ್ನು ಆಕ್ರಮಿಸಿಕೊಂಡಿದ್ದವು. ಕೆಲವು ಅಗತ್ಯ ವಸ್ತುಗಳ ಬೆಲೆ ತುಟ್ಟಿಯಾಗಿದ್ದರೂ ಸಹ  ಸಾಂಪ್ರದಾಯಕವಾಗಿ ಆಚರಿಸಲೇಬೇಕಾದ ಅನಿರ್ವಾತೆಯಿಂದ ಜನತೆ ಖರೀದಿಯಲ್ಲಿ ತೊಡಗಿದ್ದರು.

ರಾಮನಗರದಲ್ಲಿ ಮಂಡಿಪೇಟೆ, ಮುಖ್ಯರಸ್ತೆ, ಹಳೇಬಸ್ ನಿಲ್ದಾಣದ ಆಸುಪಾಸು ಹಾಗೂ ಮಾಗಡಿ ರಸ್ತೆಗಳಲ್ಲಿ ಗ್ರಾಹಕರು ಯಗಾದಿ ಹಬ್ಬಕ್ಕಾಗಿ ಬೆಲ್ಲ,  ಕಡಲೇಕಾಯಿ ಬೀಜ, ಕಡ್ಲೆಬೇಳೆ, ಮೈದಾಹಿಟ್ಟು, ಅಡುಗೆ ಎಣ್ಣೆಯನ್ನು ಖರೀದಿಸುತ್ತಿದ್ದುದು ಕಂಡುಬಂತು.

ಕೋವಿಡ್ ಕಾರ್ಮೋಡ ಸರಿದಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಸಡಗರ ಹೆಚ್ಚಾಗಿದೆಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಯುಗಾದಿ ಮುನ್ನಾ ದಿನವಾದ ಶುಕ್ರವಾರ ಖರೀದಿ ಭರಾಟೆ ಜೋರಾಗಿತ್ತುಕಳೆದೆರಡು ವರ್ಷ ಕೊರೋನಾ ಸಾಂಕ್ರಾಮಿಕ ರೋಗವು ಹಬ್ಬದಾಚರಣೆಗೆ ತೊಡಕಾಗಿತ್ತುವ್ಯಾಪಾರ ನಷ್ಟಉದ್ಯೋಗ ಕಡಿತದಿಂದ ಆದಾಯಕ್ಕೆ ಕತ್ತರಿ ಬಿದ್ದ ಹಿನ್ನಲೆಯಲ್ಲಿ ಜನತೆ ಹಬ್ಬಕ್ಕೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲಆದರೆಪರಿಸ್ಥಿತಿ ಈಗ ಬದಲಾಗಿದ್ದುಎಲ್ಲಾ ವಲಯವೂ ಬಹುಕೇತ ಚೇತರಿಕೆಯ ಹಾದಿ ಹಿಡಿದಿದೆಹೀಗಾಗಿ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು