ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ) ಬೆಂಗಳೂರು ಅರ್ಪಿಸುವ ಬುದ್ಧ ಪೂರ್ಣಿಮಾ ಮತ್ತು 10ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಮೇ.25ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9ವರೆಗೆ ಬೆಂಗಳೂರಿನ ಜೆಸಿ ರಸ್ತೆಯ ಕನ್ನಡ ಭವನ ‘ನಯನ ರಂಗ ಮಂದಿರ’ದಲ್ಲಿ 10ನೇ ಬುದ್ಧ ಪೂರ್ಣಿಮಾ ಮತ್ತು ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಜರುಗಿತು.
ಇದೇ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಉಪನ್ಯಾಸ ಸಭಾ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಡಾ.ಶಂಕರ್ ಬಿದರಿ, ಡಿಜಿಪಿ(ನಿವೃತ್ತ) ಡೈರೆಕ್ಟರ್ ಜನರಲ್ ಮತ್ತು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬೆಂಗಳೂರು ರಾಜ್ಯಸಭಾ ಅಭ್ಯರ್ಥಿ ತೆಲುಗು ದೇಶಂ ಪಾರ್ಟಿ ಅವರು ವಹಿಸಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯಕೋಕಿಲ ಚಲನಚಿತ್ರ ನಟರು, ಮತ್ತು ಗೌರವ ಶೆಟ್ಟಿ, ಸೋಶಿಯಲ್ ಮೀಡಿಯಾ ಸ್ಟಾರ್, ಡಾ. ವಿ ನಟರಾಜ್ ಚಲನಚಿತ್ರ ನಿರ್ಮಾಪಕರು ಮತ್ತು ಗಾಯಕರು ಭಾಗಿಯಾಗಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ‘ಬುದ್ಧ ಪೂರ್ಣಿಮಾ ಮತ್ತು 10ನೇ ಸಾಂಸ್ಕೃತಿಕ ಸಿಂಚನ’ ಪ್ರಶಸ್ತಿಗಳು ವಿತರಿಸಲಾಯಿತು.
ಇದು ನಿಮ್ಮ ವಾಹಿನಿ’ ಪತ್ರಕರ್ತ ಕಿಶೋರ್ ಕುಮಾರ್ , ಶ್ರೀಮತಿ ಜೆಸಿಕಾ ನಾಟ್ಯ, ಮನೆ ಮಕ್ಕಳಿಂದ ವಿಶೇಷ ಕಾರ್ಯಕ್ರಮ, ಶ್ರೀಮತಿ ಅನುಷ ಸುಮೇಶ್ ಲಾಸ್ಯ ಕಲ್ಚರಲ್ ಅಕಾಡೆಮಿ, ಸ್ವರತಂತ್ರ ತಂಡದಿಂದ ಸಿನಿಹನಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಯಿತು.