ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ಆಶಾಕಿರಣ ಜೀವಂತವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ನೀಡಿರುವ ಹೈಕಮಾಂಡ್ ಕರ್ನಾಟಕವನ್ನೇ ಲೋಕಸಭೆಯ ಅಡಿಪಾಯ ಮಾಡಿಕೊಳ್ಳಲು ಹೊರಟಿದೆ.
ಅದಕ್ಕೂ ಮೊದಲ ಪಕ್ಷದಲ್ಲಿರುವ ಅಸಮಾಧಾನಗಳನ್ನು ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಶಾಸಕರ ಮುನಿಸು ಶಮನಕ್ಕೆ ಇಂದಿನಿಂದ ಸಿಎಂ ಹಾಗೂ ಡಿಸಿಎಂ ನೇತೃತ್ರವದಲ್ಲಿ ಸಭೆ ನಡೆಯಲಿದೆ.
ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡ ವಿಚಾರ ತಾರಕ್ಕೇರಿದ ಬೆನ್ನಲ್ಲೇ, ಶಾಸಕರ ಅಹವಾಲು ಆಲಿಕೆಗೆ ಸಿಎಂ ಹಾಗೂ ಡಿಸಿಎಂ ಅಖಾಡಕ್ಕಿಳಿದಿದ್ದಾರೆ. ಆರು ಜಿಲ್ಲೆಗಳ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಸಭೆ ನಡೆಯಲಿದೆ. ಆರು ಜಿಲ್ಲೆಗಳ ಸಚಿವರು, ಶಾಸಕರ ಸಮಸ್ಯೆ ಆಲಿಸಲು ಸಿಎಂ ಸಭೆ ಕರೆದಿದ್ದಾರೆ. ,