ಬೆಂಗಳೂರು: ಇಟಲಿಯ ಬಲಪಂಥೀಯ ನಾಯಕಿ ಜಾರ್ಜಿಯಾ ಮೆಲೋನಿ ಅಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಭಾರತ ಇಟಲಿ ಸಂಬಂಧಗಳು ಗಣನೀಯವಾಗಿ ಸುಧಾರಿಸಿವೆ. ಈಗ ಈ ಕೊಂಡಿ ಮತ್ತೊಂದು ಮೈಲಿಗಲ್ಲನ್ನು ದಾಟಿದೆ. ಇಟಲಿಯ ಹೊಸ ಕಾನ್ಸುಲೇಟ್ ಜನರಲ್ ಶನಿವಾರ ಬೆಂಗಳೂರಿನಲ್ಲಿ ತನ್ನ ಹೊಸ ಕಚೇರಿಯನ್ನು ರಿಚ್ಮಂಡ್ ರಸ್ತೆಯಲ್ಲಿ ಔಪಚಾರಿಕವಾಗಿ ತೆರೆಯುವ ಮೂಲಕ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಇಟಲಿಯ ಉನ್ನತ ರಾಜತಾಂತ್ರಿಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.”ಈ ಕಚೇರಿಯು ಇಟಲಿ ಮತ್ತು ದಕ್ಷಿಣ ಭಾರತ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ” ಎಂದು ಇಟಾಲಿಯನ್ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ರಾಯಭಾರಿ ರಿಕಾರ್ಡೊ ಗೌರಿಗ್ಲಿಯಾ ಹೇಳಿದರು.
ಈ ಹೊಸ ಕಾನ್ಸುಲೇಟ್ನೊಂದಿಗೆ, ನಾವು ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದೇವೆ. ನಾವು ಎರಡು ದಿಕ್ಕುಗಳಲ್ಲಿ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ, ಸಮರ್ಥ ಮತ್ತು ವೇಗದ ವೀಸಾ ವಿತರಣೆ ಮಾಡಲಿದ್ದು, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಹಯೋಗಗಳನ್ನು ಉತ್ತೇಜಿಸುತ್ತೇವೆ ಎಂದು ಅವರು ಹೇಳಿದ್ದಾರೆ.