News Karnataka Kannada
Thursday, May 09 2024
ಬೆಂಗಳೂರು

ಬೆಂಗಳೂರಿನಲ್ಲಿ ಭಾರೀ ಮಳೆ: ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ

Heavy rains lash Bengaluru, roads like lakes, motorists stranded
Photo Credit : News Kannada

ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು ಅನೇಕ ಕಡೆ ಅವಘಡಗಳು ಸಂಭವಿಸಿವೆ. ರಸ್ತೆಗಳು ಕೆರೆಯಂತಾಗಿವೆ, ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಅಂಡರ್ ಪಾಸ್​ಗಳಲ್ಲಿ ನೀರು ನಿಂತು ವಾಹನಗಳು ಮುಳುಗಿವೆ. ಇಂದು ಕೂಡ ಜಿಟಿ ಜಿಟ ಮಳೆ ಮುಂದುವರೆದಿದ್ದು ಇಡೀ ಬೆಂಗಳೂರು ಕೂಲ್ ಕೂಲ್ ಆಗಿದೆ.

ರಸ್ತೆಗಳು ಮುಳುಗಿ ಕೆರೆಯಂತಾಗಿವೆ. ವಾಹನ ಸವಾರರಿಗೆ ಬೆಂಗಳೂರಿನ ಅಂಡರ್ ಪಾಸ್​ಗಳು ಮೃತ್ಯುಕೂಪದಂತಾಗಿವೆ. ನಿನ್ನೆ ರಾತ್ರಿ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ರಾಜಕಾಲುವೆ ನೀರು ನುಗ್ಗಿ 50 ಮೀಟರ್​ ಉದ್ದದ ರಸ್ತೆ ಜಲಾವೃತಗೊಂಡಿತ್ತು. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಏರ್ಪೋರ್ಟ್​ ರಸ್ತೆ, ಹೆಬ್ಬಾಳ ನೀರಿನಿಂದ ಜಲಾವೃತವಾದರೆ, ಶೇಷಾದ್ರಿಪುರಂ ಅಂಡರ್​ ಪಾಸ್ ಜನರಿಗೆ ಓಡಾಡಲು ಆಗದ ರೀತಿ ನೀರಿನಿಂದ ಭರ್ತಿಯಾಗಿತ್ತು. ಮಾರತ್ತಹಳ್ಳಿ, AECS ಲೇಔಟ್ ರಸ್ತೆಯಲ್ಲಿ ಜಲಧಾರೆ ಧುಮ್ಮುಕ್ಕಿತು. ಜಲಯಮಯವಾದ ಔಟರ್ ರಿಂಗ್ ರೋಡ್, ದೇವರಬಿಸನಹಳ್ಳಿ, ನೈಸ್ ರೋಡ್ ಜಂಕ್ಷನ್ ನದಿಯಂತೆ ಆಗಿದ್ದವು. ಇನ್ನೂ ಕಟ್ಟಡಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು