ಬೆಂಗಳೂರು: ರಾಜ್ಯದ ಅರ್ಚಕರಿಂದ ಬಹುದಿನದಗಳಿಂದ ಕೇಳಿ ಬರುತ್ತಿದ್ದ ಮಹತ್ವದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಆ ಮೂಲಕ ಮುಜರಾಯಿ ಸಿ ದರ್ಜೆ ದೇವಸ್ಥಾನದ ಅರ್ಚಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಅರ್ಚರು ಬಹು ವರ್ಷಗಳಿಂದ ಇದರೊಂದು ಬೇಡಿಕೆಯನ್ನು ಸರ್ಕಾರ ಮುಂದಿಡುತ್ತಾ ಬಂದಿದ್ದರು. ಅನಾರೋಗ್ಯ ಪೀಡಿತ ಅರ್ಚಕರಿಂದ ಅನುವಂಶಿಗಳಿಗೆ ಹಕ್ಕು ಹಸ್ತಾಂತರಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಮುಂದಿಡುತ್ತಿದ್ದರು. ಸದ್ಯ ಅರ್ಚಕರ ಮನವಿಗೆ ಸ್ಪಂಧಿಸುವ ರಾಜ್ಯ ಸರ್ಕಾರ, ಅರ್ಚರಕರ ಬೇಡಿಕೆ ಗ್ರೀನ್ ಸಿಗ್ನಲ್ ನೀಡಿದೆ.
ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ ಮಾತ್ರ ಹಕ್ಕು ಹಸ್ತಾಂತರ ಮಾಡುವ ಅವಕಾಶ ನೀಡಲಾಗಿತ್ತು. ಆದರೆ ಸದ್ಯಕ್ಕೆ ನಿಯಮಕ್ಕೆ ಬದಲಾವಣೆ ತಂದಿರುವ ಸರ್ಕಾರ, ಅನಾರೋಗ್ಯ ಪೀಡಿತ ಅರ್ಚಕರಿಂದ ಅನುವಂಶಿಗಳಿಗೆ ಹಕ್ಕು ಹಸ್ತಾಂತರಕ್ಕೆ ಅನುಮತಿಯನ್ನು ನೀಡಿದೆ.
ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಹೊಸ ಆದೇಶದ ಅನ್ವಯ ಅನಾರೋಗ್ಯ ಪೀಡಿತ ಅರ್ಚಕರಿಂದ ಅನುವಂಶಿಗಳಿಗೆ ಹಕ್ಕು ಹಸ್ತಾಂತರ ಮಾಡಬಹುದಾಗಿದೆ.