News Karnataka Kannada
Saturday, April 27 2024
ಬೆಂಗಳೂರು

ರೈತರ ಕೃಷಿ ಕ್ಷೇತ್ರ ಸಮಸ್ಯೆ: ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

Farmers' agriculture sector issues: Series of training programmes launched
Photo Credit : By Author

ಬೆಂಗಳೂರು: ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಕೃಷಿ ಇಲಾಖೆ, ಕರ್ನಾಟಕ ಸರ್ಕಾರದವರು ಜಂಟಿಯಾಗಿ ಆಯೋಜಿಸುತ್ತಿರುವ “ರೈತರ ಕೃಷಿ ಕ್ಷೇತ್ರ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿನೂತನ ರಾಜ್ಯ ಮಟ್ಟದ ಆನ್‍ಲೈನ್ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆ ಕುರಿತು ಡಾ.ಬಿ.ಜಹೀರ್ ಅಹಮ್ಮದ್, ಸಸ್ಯ ರೋಗ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಗುಲ್ಬರ್ಗಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತೊಗರಿ ಬೆಳೆಗಾರರು ಬೇಸಿಗೆಯಲ್ಲಿ ಆಳವಾದ ಉಳುಮೆ, ಮಣ್ಣು ಪರೀಕ್ಷೆ ಆಧಾರದ ಮೇಲೆ ಸೂಕ್ತ ಪೋಷಕಾಂಶ ಒದಗಿಸುವುದು, ಬೆಳೆ ಪರಿವರ್ತನೆ, ಟ್ರೈಕೋಡರ್ಮಾಮಿಶ್ರಿತ ಬೇವಿನ ಹಿಂಡಿ, ಎರೆಹುಳುಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಬಳಸುವುದು, ಶಿಫಾರಸ್ಸಿನ ತಳಿಗಳನ್ನು ಬಳಸುವುದು, ಹೊಲಗಳಲ್ಲಿ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸುವುದು, ಟ್ರೈಕೋಡರ್ಮಾಜೈವಿಕ ಶೀಲಿಂದ್ರ ನಾಶಕದಿಂದ ಬೀಜೋಪಚಾರ, ಸೊರಗು ರೋಗ ಕಂಡು ಬಂದಲ್ಲಿ ಆರಂಭಿಕ ಹಂತದಲ್ಲಿ 5 ಗ್ರಾಂಟ್ರೈಕೋಡರ್ಮಾ ಅಥವಾ ಕಾರ್ಬನ್‍ಡೈಜಿಂ ಮತ್ತು ಮ್ಯಾಂಕೋಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ನೆನೆಯುವಂತೆ ಸಿಂಪಡಿಸುವ ಮೂಲಕ ತೊಗರಿಯಲ್ಲಿ ಸೊರಗು ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಆನ್‍ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು, ಡಾ.ಕೆ.ಶಿವರಾಮು,ಸಂಯೋಜಕರು ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಎಂ.ಗೋಪಾಲ್ ಸಂಯೋಜಕರು ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಎನ್. ಬಸವರಾಜು, ರಾಜ್ಯ ಸಂಯೋಜಕರು (ಆತ್ಮ), ಬೆಂಗಳೂರು ಇವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು