ಬೆಂಗಳೂರು: ನೆದರ್ ಲ್ಯಾಂಡ್ ದೇಶದ ಭಾರತದ ರಾಯಭಾರಿ ಕಛೇರಿ ಕೃಷಿ ಕೌನ್ಸಿಲರ್ ರವರಾದ ಮೈಕಲ್ ವ್ಯಾನ್ಎರ್ಕೆಲ್ ಹಾಗೂ ಬೆಂಗಳೂರಿನಲ್ಲಿರುವ ರಾಯಭಾರಿ (ಕೃಷಿ) ರಿಕ್ ನೋಬಲ್ ರವರು ನೆದರ್ ಲ್ಯಾಂಡ್ ನ ವಿವಿಧ ಒಂಬತ್ತು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ, ಜಿಕೆವಿಕೆ ಆವರಣಕ್ಕೆ ಭೇಟಿ ನೀಡಿ ಉಭಯ ದೇಶಗಳ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಾ ಸಭೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಭಾರತ ಹಾಗೂ ನೆದರ್ ಲ್ಯಾಂಡ್ ದೇಶಗಳ ನಡುವೆ ಕೃಷಿ ಮತ್ತು ತೋಟಗಾರಿಕೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಪುಲ ಅವಕಾಶಗಳಿವೆಯೆಂದು ತಜ್ಞರು ಅಭಿಪ್ರಾಯ ಪಟ್ಟರು.
ಡಾ. ಕೆ.ಬಿ. ಉಮೇಶ, ಸಂಶೋಧನಾ ನಿರ್ದೇಶಕರು ಉಭಯ ದೇಶಗಳ ಕೃಷಿ ಮತ್ತು ತೋಟಗಾರಿಕಾ ವಲಯಗಳ ಸ್ವಾಮ್ಯತೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ವಿವಿಧ ಕೃಷಿ ಸಂಬಂಧಿತ ಕಂಪನಿಗಳ ಅಧಿಕಾರಿಗಳು ಮತ್ತು ತೋಟಗಾರಿಕೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ವಿಜ್ಞಾನಿಗಳು ಭಾಗವಹಿಸಿದ್ದರು.