News Karnataka Kannada
Friday, May 03 2024
ಬೆಂಗಳೂರು

ಬೆಂಗಳೂರು: ಭಾರತ, ನೆದರ್ ಲ್ಯಾಂಡ್ ನಡುವೆ ಕೃಷಿ ಅಭಿವೃದ್ಧಿಗೆ ಅವಕಾಶ

Bengaluru: India and The Netherlands have the opportunity to develop agriculture
Photo Credit : By Author

ಬೆಂಗಳೂರು: ನೆದರ್ ಲ್ಯಾಂಡ್ ದೇಶದ ಭಾರತದ ರಾಯಭಾರಿ ಕಛೇರಿ ಕೃಷಿ ಕೌನ್ಸಿಲರ್ ರವರಾದ ಮೈಕಲ್ ವ್ಯಾನ್‍ಎರ್‍ಕೆಲ್ ಹಾಗೂ ಬೆಂಗಳೂರಿನಲ್ಲಿರುವ ರಾಯಭಾರಿ (ಕೃಷಿ) ರಿಕ್ ನೋಬಲ್ ರವರು ನೆದರ್ ಲ್ಯಾಂಡ್ ನ ವಿವಿಧ ಒಂಬತ್ತು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ, ಜಿಕೆವಿಕೆ ಆವರಣಕ್ಕೆ ಭೇಟಿ ನೀಡಿ ಉಭಯ ದೇಶಗಳ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಾ ಸಭೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಭಾರತ ಹಾಗೂ ನೆದರ್ ಲ್ಯಾಂಡ್ ದೇಶಗಳ ನಡುವೆ ಕೃಷಿ ಮತ್ತು ತೋಟಗಾರಿಕೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಪುಲ  ಅವಕಾಶಗಳಿವೆಯೆಂದು ತಜ್ಞರು ಅಭಿಪ್ರಾಯ ಪಟ್ಟರು.

ಡಾ. ಕೆ.ಬಿ. ಉಮೇಶ, ಸಂಶೋಧನಾ ನಿರ್ದೇಶಕರು ಉಭಯ ದೇಶಗಳ ಕೃಷಿ ಮತ್ತು ತೋಟಗಾರಿಕಾ ವಲಯಗಳ ಸ್ವಾಮ್ಯತೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಕೃಷಿ ಸಂಬಂಧಿತ ಕಂಪನಿಗಳ ಅಧಿಕಾರಿಗಳು ಮತ್ತು ತೋಟಗಾರಿಕೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ವಿಜ್ಞಾನಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು