News Karnataka Kannada
Saturday, May 18 2024
ಬೆಂಗಳೂರು

ಹೊಸ ವರ್ಷದ ಆರಂಭದಲ್ಲೇ ಜನರಿಗೆ ‘ಕರೆಂಟ್ ಶಾಕ್ʼ

Photo Credit : News Kannada

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಬಂತು ಗೃಹಜ್ಯೋತಿ ಯೋಜನೆ ತಂತು. ಆದರೆ ಕಾಂಗ್ರೆಸ್ ಕೊಟ್ಟು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ‌ ಎಂಬ ಅನುಮಾನ ಶುರುವಾಗಿದೆ. ಯಾಕೆಂದ್ರೆ ಒಂದು ಕಡೆ ಯುವನಿಧಿ ಯೋಜನೆ ಜಾರಿಗೆ ತಂದು, ಇತ್ತ ಶಾಲಾ ಶುಲ್ಕವನ್ನು ಹೆಚ್ಚಿಸತೊಡಗಿತ್ತು, ಈಗ ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ಬಳಿಕ ಕರೆಂಟ್​ ಬಿಲ್ ಕಡಿಮೆಯಾಯ್ತು ಅಂತ ನಿಟ್ಟುಸಿರು ಬಿಡುವಷ್ಟರಲ್ಲೇ ಎಸ್ಕಾಂಗಳು ಮತ್ತೊಂದು​ ಶಾಕ್ ಕೊಡೋಕೆ ಸಜ್ಜಾಗಿವೆ. ಹೀಗಾಗಿ ಹೊಸ ವರ್ಷದ ಹೊಸ್ತಿಲಲ್ಲೇ ಸಾರ್ವಜನಿಕರಿಗೆ ಕರೆಂಟ್​ ಶಾಕ್​ ಸಾಧ್ಯತೆ ಹೆಚ್ಚಾಗಿದೆ.

ವಿದ್ಯುತ್​ ದರ ಹೆಚ್ಚಳ ಕೋರಿ 5 ವಿದ್ಯುತ್​ ಸರಬರಾಜು ಕಂಪನಿಗಳು ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್ಥಿಕ ನಿರ್ವಹಣೆ ನಷ್ಟದ ನೆಪವೊಡ್ಡಿ ಪ್ರತಿ ಯುನಿಟ್​ ದರ ಹೆಚ್ಚಿಸುವಂತೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ ಪ್ರತಿ ಯುನಿಟ್​ಗೆ 49 ಪೈಸೆ ಹೆಚ್ಚಿಸುವಂತೆ ಕೆಇಆರ್​ಸಿಗೆ ಮನವಿ ಮಾಡಿದ್ದು, ಇದೇ ರೀತಿ ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ ನಿಂದಲು 40 ರಿಂದ 60 ಪೈಸೆ ದರ ಪರಿಷ್ಕರಣೆಗೆ ಪ್ರವಾಸನೆ ಸಲ್ಲಿಸಲಾಗಿದೆ. ಪ್ರತಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ‌ ಸಲ್ಲಿಸಲಾಗುತ್ತೆ. ಅದರಂತೆ ಈ ಬಾರಿ ಗೃಹಜ್ಯೋತಿ ಜಾರಿ ನಡುವೆ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೆ ಗ್ರಾಹಕರಿಗೆ ಹೊರೆಯಾಗದಂತೆ ದರ ಏರಿಕೆ ಮಾಡಲು ಇಲಾಖೆ ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ವಿದ್ಯುತ್ ಸರಬರಾಜು ಕಂಪನಿಗಳ ದರ ಏರಿಕೆ ಬೇಡಿಕೆಗೆ ಕೆಇಆರ್​ಸಿ ಗ್ರಿನ್‌ ಸಿಗ್ನಲ್ ಕೊಡುತ್ತಾ ಅನ್ನೊದನ್ನ ಕಾದುನೋಡಬೇಕಿದೆ̤

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು