ದಾವಣಗೆರೆ: ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆಯಿಂದ ಕಂಗಾಲಾಗಿದ್ದ ಜಿಲ್ಲೆಯ ಜನರಿಗೆ ಕೊನೆಗೂ ಸಿಕ್ತು ವರುಣನ ಆಶೀರ್ವಾದ. ಜಿಲ್ಲೆಯ ಅಕಾಲಿಕ ಮಳೆಯಿಂದ ಹೆಬ್ಬಾಳ ಗ್ರಾಮದ ಜನರ ಸಂತೋಶಕ್ಕೆ ಪಾರೆ ಇಲ್ಲದಂತೆ ಆಗಿದೆ.
ಸದ್ಯ ದಿಢೀರ್ ಮಳೆಯಿಂದ ಗ್ರಾಮದಲ್ಲಿ ಕೂಲ್ ಕೂಲ್ ವಾತಾವರಣ ಮೂಡಿದೆ. ಬರಗಾಲದಿಂದ ಬೆಂದಿರುವ ಜನರು ಮಳೆಯ ನಿರೀಕ್ಷೆಯಲ್ಲಿದ್ದರು. ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದ ಜನರ ಮನಸ್ಸಿಗೆ ಮಳೆರಾಯ ರಿಲ್ಯಾಕ್ಸ್ ನೀಡಿದ್ದಾನೆ.