News Karnataka Kannada
Friday, May 03 2024
ದಾವಣಗೆರೆ

ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯಕ್ಕೆ ಮೂವರು ಕಂದಮ್ಮಗಳ ಜೀವ ಬಲಿ

Death
Photo Credit :

ಜಗಳೂರು : ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ನಿರ್ಮಾಣವಾಗಿರುವ ದೈತ್ಯಗಾತ್ರದ ಹೊಂಡಗಳು, ಇನ್ನೂ ಬದುಕಿ ಬಾಳಬೇಕಿದ್ದ ಮೂವರು ಕಂದಮ್ಮಗಳ ಜೀವಗಳನ್ನು ಬಲಿ ತೆಗೆದುಕೊಂಡಿವೆ. 510 ಎಕರೆಗೂ ಹೆಚ್ಚು ವಿಶಾಲವಾಗಿರುವ ಐತಿಹಾಸಿಕ ಕೆರೆ ಪಟ್ಟಣಕ್ಕೆ ಹೊಂದಿಕೊಂಡಂತಿದೆ.

ಕೆರೆಗೆ ನೀರು ಹರಿದುಬರುವ ಕಾಲುವೆಗಳ ಒತ್ತುವರಿಯಿಂದ ಸುಮಾರು ಎರಡು ದಶಕಗಳಿಂದ ಕೆರೆ ಭರ್ತಿಯಾಗದೇ ಖಾಲಿಯಾಗಿದೆ. ಕೆರೆ ಖಾಲಿಯಾಗಿರುವುದನ್ನು ಬಂಡವಾಳ ಮಾಡಿಕೊಂಡಿರುವ ಮಣ್ಣು ಲೂಟಿಕೋರರು ಕೆರೆಯೊಳಗೆ ಬೇಕಾಬಿಟ್ಟಿಯಾಗಿ ಜೆಸಿಬಿ ಯಂತ್ರಗಳಿಂದ ವ್ಯಾಪಕವಾಗಿ ಮಣ್ಣು ತೆಗೆದು ವಿವಿಧ ಕಾಮಗಾರಿಗಳಿಗೆ ಹಾಗೂ ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಅಕ್ರಮವಾಗಿ ಬಳಸುತ್ತಿದ್ದಾರೆ. ಮಣ್ಣು ತೆಗೆದ ಸ್ಥಳದಲ್ಲಿ ನಿರ್ಮಾಣವಾಗಿರುವ ಆಳವಾದ ದೈತ್ಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಶನಿವಾರ ಮೂರು ಮಕ್ಕಳ ಈಜಲು ತೆರಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ.

ಕೆರೆಯ ಅಂಚಿನಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸಂತೆಮುದ್ದಾಪುರದ ಶೆಖಾವತ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರ್ಘಟನೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಶೆಖಾವತ್ ಕುಟುಂಬದ ಎರಡು ಕುಡಿಗಳಾದ ಅಫ್ರಾನ್ (8) ಹಾಗೂ ಹಾಸಿನ್ (9) ಹಾಗೂ ಅಬ್ದುಲ್ ಖಾನ್ ಅವರ ಪುತ್ರ ಪೈಜಾನ್ (9) ಸಂಜೆ ಒಟ್ಟಾಗಿ ಆಟವಾಡಲು ಹೊರ ಹೋದವರು ಶವವಾಗಿ ಮರಳಿರುವ ಘಟನೆ ಪಟ್ಟಣದ ಜನರಲ್ಲಿ ತೀವ್ರ ವೇದನೆ ಮೂಡಿಸಿದೆ.

ಕಣ್ಣುಗಳಂತಿದ್ದ ಎರಡೂ ಮಕ್ಕಳನ್ನು ಕಳೆದುಕೊಂಡೆ: ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಇಬ್ಬರು ಮಕ್ಕಳ ತಂದೆ ಶೆಖಾವತ್ ದಂಪತಿ ಘಟನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ‘ಸಂಜೆ ಆಟವಾಡಿಕೊಂಡಿದ್ದ ಮಕ್ಕಳು ಕೆಲವೇ ಗಂಟೆಗಳಲ್ಲಿ ಹೆಣವಾಗಿ ಬಂದಿದ್ದಾರೆ. ನನ್ನ ಕುಟುಂಬದ ಎರಡು ಕಣ್ಣುಗಳಿಂತಿದ್ದ ಇಬ್ಬರೂ ಮಕ್ಕಳನ್ನು ಒಟ್ಟಿಗೇ ಕಳೆದುಕೊಂಡಿದ್ದೇವೆ. ನಮಗೆ ಇನ್ಯಾರು ದಿಕ್ಕು’ ಎಂದು ಶೇಖಾವತ್ ರೋದಿಸುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು.

ಗುಂಡಿಗಳೇ ಸಾವಿಗೆ ಕಾರಣ: ‘ಕೆರೆಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದರಿಂದ ದೊಡ್ಡದೊಡ್ಡ ಗುಂಡಿಗಳಾಗಿ ಮಳೆನೀರು ತುಂಬಿಕೊಂಡಿದ್ದರಿಂದ ದುರಂತಕ್ಕೆ ಕಾರಣವಾಗಿದೆ. ಕೆರೆಯಲ್ಲಿ ಬೇಕಾಬಿಟ್ಟಿ ಗುಂಡಿಗಳನ್ನು ನಿರ್ಮಿಸಿ ರಸ್ತೆ ಕಾಮಗಾರಿಗಳಿಗೆ ಬೇಕಾಗಿರುವ ಮಣ್ಣನ್ನು ತೆಗೆದಿರುವುದೂ ಘಟನೆಗೆ ಕಾರಣವಾಗಿದೆ’ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು