ದಾವಣಗೆರೆ ; ಜಗಳೂರು ಪಟ್ಟಣದ ಹೊರವಲಯದ ದಾವಣಗೆರೆ ಮುಖ್ಯ ರಸ್ತೆಯ ಪೆಟ್ರೋಲಿಯಂ ಸಮೀಪ ರಾಷ್ಟ್ರೀಯ ಪಕ್ಷಿ ನವಿಲು ಮೃತಪಟ್ಟ ಘಟನೆ ಜರುಗಿದೆ. ದಾವಣಗೆರೆ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು ಸಾರ್ವಜನಿಕರು ಹೇಳುವ ಪ್ರಕಾರ ಆಕಸ್ಮಿಕವಾಗಿ ಹಾರಿ ಬರುವಾಗ ರಸ್ತೆ ಮದ್ಯೆ ನವಿಲು ಯಾವೊದೊ ವಾಹನಕ್ಕೆ ಸಿಲುಕಿ ಮೃತಪಟ್ಟಿರುವುದು ಎಂದು ದಾರಿ ಹೋಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಬೇಟಿ ನೀಡಿ ಆ ನವಿಲುನ್ನು ಪೋಸ್ಟ್ ಮಟನ್ ರಿಪೋರ್ಟ್ ಮಾಡಿ ಮುಂದಿನ ಸರ್ಕಾರದ ನಿಯಮದ ಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಉಪ ವಲಯ ಅರಣ್ಯ ಅಧಿಕಾರಿ ಚೇತನ್ ತಿಳಿಸಿದ್ದಾರೆ.
ವಾಹನಕ್ಕೆ ಸಿಲುಕಿ ರಾಷ್ಟ್ರ ಪಕ್ಷಿ ನವಿಲು ಸಾವು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.