ಚಿತ್ರದುರ್ಗ: ಮಂಡ್ಯದ ಕೆರಗೋಡು ಗ್ರಾಮಮದಲ್ಲಿ ಪೊಲೀಸರು ಹನುಮಧ್ವಜ ಇಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಚಿತ್ರದುರ್ಗದ ಎಸ್.ಜೆಎಂ ಶಾಲಾ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರ ಧ್ಬಜ ಹಾಗೂ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಆದ್ರೆ ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ `ಜೈ ಶ್ರೀರಾಮ್’ ಅಂದರು, ಡಿಕೆ ಶಿವಕುಮಾರ್ ಶಿವ ಅಂದರು. ಕುಕ್ಕರ್ ಬಾಂಬ್ ಹಿಡಿದು ಬಂದನಿಗೆ ಬ್ರದರ್ ಅಂದರು, ಅವರ ಹೃದಯದಲ್ಲಿ ಟಿಪ್ಪು ತುಂಬಿದ್ದಾನೆ. ಹನುಮಧ್ವಜ ಕೆಳಗಿಳಿಸಲು ನೇರವಾಗಿ ಕಾಂಗ್ರೆಸ್ ಕಾರಣ. ಇದು ಹಿಂದೂ ವಿರೋಧಿ ಹಾಗೂ ರಾಮ ವಿರೋಧಿ ನೀತಿ.
ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಲ್ಲಿ ರಾಮ ಇದ್ರೆ ಆಗಲ್ಲ, ಮನಸ್ಸಿಲ್ಲಿ ಇರೋದು ಟಿಪ್ಪು. ಹನುಮ ಧ್ವಜ ಕಿತ್ತುಹಾಕಿರುವುದು ಹಿಂದೂಗಳಿಗೆ ಮಾಡಿರುವ ಅವಮಾನ. ಗ್ರಾಮ ಪಂಚಾಯಿತಿಯಲ್ಲೇ ತೀರ್ಮಾನ ಮಾಡಿದ ಬಳಿಕ ಹನುಮಧ್ವಜ ಹಾಕಲಾಗಿತಗ್ತು. ಆದ್ರೆ ಕಾಂಗ್ರೆಸ್ಗೆ ಹನುಮನ ಬಗ್ಗೆ ದ್ವೇಷದಿಂದ ಈ ಕೆಲಸ ಮಾಡಿದೆ ಎಂದು ಹನುಮಧ್ವಜ ಇಳಿಸಿದ ವಿಚಾರಕ್ಕೆ ಜನರು ಕೆಂಡ ಕಾರಿದ್ದಾರೆ.