News Karnataka Kannada
Tuesday, May 07 2024
ಬೆಂಗಳೂರು

ಬೆಂಗಳೂರು: ಉಡುಪಿ ಕ್ಷೇತ್ರದಿಂದ ಚಿಂತಕ ರೋಹಿತ್ ಚಕ್ರತೀರ್ಥ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ

The BJP is planning to field thinker Rohit Chakratheertha from udupi assembly constituency.
Photo Credit : Facebook

ಬೆಂಗಳೂರು: ಲೇಖಕ ಮತ್ತು ಚಿಂತಕ ರೋಹಿತ್ ಚಕ್ರತೀರ್ಥ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಆರ್ ಎಸ್ ಎಸ್  ಮತ್ತು ಬಿಜೆಪಿ ರಾಜ್ಯ ನಾಯಕರು ಈಗಾಗಲೇ ಪಕ್ಷದ ಮುಖಂಡ ಪ್ರಮೋದ್ ಮಧ್ವರಾಜ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ರೋಹಿತ್ ಗೆ  ಚುನಾವಣೆಯಲ್ಲಿ ಯಾವುದೇ ದೊಡ್ಡ ಸವಾಲುಗಳು ಎದುರಾಗದಂತೆ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಈ ಕ್ಷೇತ್ರವನ್ನು ಬಿಜೆಪಿಯ ರಘುಪತಿ ಭಟ್ ಪ್ರತಿನಿಧಿಸುತ್ತಿದ್ದಾರೆ. ಪ್ರಮೋದ್ ಮಧ್ವರಾಜ್ ಪಕ್ಷ ತೊರೆದ ನಂತರ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಇಲ್ಲದ ಈ ‘ಸುರಕ್ಷಿತ’ ಕ್ಷೇತ್ರದಿಂದ ಯುವ ನಾಯಕರಿಗೆ ಅವಕಾಶ ನೀಡುವ ಅವಶ್ಯಕತೆಯಿದೆ ಎಂದು  ಆರ್ ಎಸ್ ಎಸ್ ನಾಯಕರು ನಂಬಿದ್ದಾರೆ.

ಉಡುಪಿಯಲ್ಲಿ ಚಕ್ರತೀರ್ಥರಿಗೆ ಬಲವಾದ ಅನುಯಾಯಿಗಳಿದ್ದಾರೆ. ಅವರು ಸ್ಥಳೀಯ ನಿವಾಸಿಯಾಗಿರುವುದರಿಂದ, ಅವರಿಗೆ ಯಾವುದೇ ಸವಾಲುಗಳು ಇಲ್ಲದಿರಬಹುದು. ಚಕ್ರತೀರ್ಥ ಸುಲಭವಾಗಿ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ನೆರೆಯ ಕ್ಷೇತ್ರಗಳಲ್ಲಿ ಮೊಗವೀರ, ಬಂಟರು ಮತ್ತು ಬಿಲ್ಲವ ಸಮುದಾಯಗಳಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ” ಎಂದು ಮೂಲಗಳು ತಿಳಿಸಿವೆ.

ಚಕ್ರತೀರ್ಥರನ್ನು ಕರ್ನಾಟಕದ ಜನಪ್ರಿಯ ಸಂಘ ಮೂಲದ ಚಿಂತಕ ಎಂದು ಪರಿಗಣಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು