ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಳು ಮಾಡಿದ ಬಿಎಲ್ ಸಂತೋಷ್ಗೆ ದಿಕ್ಕಾರ. ಬಿಎಸ್ ಯಡಿಯೂಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಿದ್ದೇ ರೇಣುಕಾಚಾರ್ಯ ಸೋಲಿಗೆ ಕಾರಣ. ಕರ್ನಾಟಕದಲ್ಲಿ ಬಿಎಲ್ ಸಂತೋಷ ಬಿಜೆಪಿ ಹಾಳು ಮಾಡಿದ್ಧಾರೆ. ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಪಡೆದರೇ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.