ಬೆಂಗಳೂರು: ಕನ್ನಡ ಹೋರಾಟಗಾರ ಮಾಜಿ ಶಾಸಕ ಜಿ. ನಾರಾಯಣ್ ಸ್ಥಾಪಿತ ಕನ್ನಡ ಚಳುವಳಿ ಕೇಂದ್ರ ಸಮಿತಿ ಬುಧುವಾರ ನಗರದ ಬನ್ನಪ್ಪ ಉದ್ಯಾನವನದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನಿಸಿ ಪರಮೇಶ್ವರ ಪುಲಕೇಶಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಉತ್ತರ ಕರ್ನಾಟಕ ಹಾಗು ಬೆಂಗಳೂರಿನ ನಿವೃತ್ತ ೧೦ ಯೋಧರಿಗೆ ಪರಮೇಶ್ವರ ಪುಲಕೇಶಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಗಣ್ಯರು ಕನ್ನಡ ಭಾಷೆ ನುಡಿ ಗಡಿ ಗಾಗಿ ಹೋರಾಡಿದ ಅನೇಕ ಗಣ್ಯರನ್ನು ನೆನಪಿಸಿಕೊಂಡರು .
ಸಮಾರಂಭದಲ್ಲಿ ನಿವೃತ್ತ ಸೇನಾಧಿಕಾರಿ ಡಾ. ಶಿವಣ್ಣ , ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘದ ಅಧ್ಯಕ್ಷ ಗುರುದೇವ್ ನಾರಾಯಣಕುಮಾರ್, ಸಮತಾ ಸೈನಿಕ ದಳ ಅಧ್ಯಕ್ಷ ವೆಂಕಟಸ್ವಾಮಿ, ಅಧ್ಯಕ್ಷರು ಕನ್ನಡ ಜನ ಶಕ್ತಿ ಕೇಂದ್ರ ಸಿ.ಕೆ. ರಾಮೇಗೌಡ ಮುಂತಾದವರು ಉಪಸ್ಥಿತರಿದ್ದರು.