ಬೆಂಗಳೂರು: ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ. ಬಡವರ ಮಕ್ಕಳನ್ನು ಮಾತ್ರ ಅವರು ಬಲಿ ಕೊಡುವುದು. ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುವುದಿಲ್ಲ. ಬಿಜೆಪಿಗರ ಮಾತಿಗೆ ಯುವಕರು ಬಲಿಯಾಗಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಆರಂಭದಿಂದಲೂ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ಹೇಳಿಕೊಂಡು ಬಂದಿದೆ. ಆದರೆ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡುತ್ತಿಲ್ಲ. ಯುವಕರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಧರ್ಮ ರಕ್ಷಣೆ, ಗೋರಕ್ಷಣೆಯ ಬಿರುದು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಮೊದಲು ಮೆಸ್ತಾ ಕುಟುಂಬಕ್ಕೆ ಕ್ಷಮೆಯಾಚನೆ ಮಾಡಬೇಕು. ಧಮ್ ಬಗ್ಗೆ ಬಿಜೆಪಿಗರು ಮಾತನಾಡುತ್ತಾರೆ. ಬಿಜೆಪಿಗೆ ಈಗ ಧಮ್ ಇದೆಯಾ ಈ ಘಟನೆ ಬಗ್ಗೆ ಮಾತನಾಡಲು. ನಾವು 15 ದಿನ ಕಾಯುತ್ತೇವೆ. ಅಷ್ಟರಲ್ಲಿ ಬಿಜೆಪಿಗರು ಕ್ಷಮೆ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.