ಬೆಂಗಳೂರು: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಚಂದ್ರಶೇಖರ್ ಅವರು ನವೆಂಬರ್ ೩ ರಂದು ಶವವಾಗಿ ಪತ್ತೆಯಾಗಿದ್ದರು. ರೇಣುಕಾಚಾರ್ಯ ಅವರ ಕುಟುಂಬದವರು ಸಾವಿನ ಕಾರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತು.
ಮೂಲಗಳ ಪ್ರಕಾರ, ಘಟನೆಯ ತನಿಖೆಗಾಗಿ ಸಿಐಡಿ ವಿಶೇಷ ತಂಡವನ್ನು ರಚಿಸಿದೆ. “ಒಂದು ತಂಡವು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತ ಚಂದ್ರಶೇಖರ್ ಅವರ ಚಲನವಲನಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ” ಎಂದು ಮೂಲಗಳು ವಿವರಿಸಿವೆ.