ಬೆಂಗಳೂರು: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 351 ನೇ “ಮಧ್ಯಾರಾಧನೆ” ಪ್ರಯುಕ್ತ ಪರಮ ಪೂಜ್ಯ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪೂಜಿಸಿ ಶ್ರೀಮನ್ ಮೂಲ ರಾಮದೇವರಿಗೆ ಸಮರ್ಪಿಸಿದ ನೂತನ ನವರತ್ನ ಕವಚವನ್ನು “ಮಧ್ಯಾರಾಧನೆ” ಪ್ರಯುಕ್ತ ಶ್ರೀ ಗುರುರಾಯರ ಬೃಂದಾವನಕ್ಕೆ ಸಮರ್ಪಿಸಿ ಅಲಂಕರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಮಾತನಾಡುತ್ತಾ ಈ ಮಹತ್ತರವಾದ ಕಾರ್ಯವನ್ನು ಪರಮಪೂಜ್ಯ ಶ್ರೀ ಸುಬುಧೇದ್ರ ತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಭಕ್ತರ ಸಹಕಾರದೊಂದಿಗೆ ರಾಯರ 351ನೇ ಆರಾಧನೆಯ ಈ ಶುಭ ಸಂದರ್ಭದಲ್ಲಿ ಸಮರ್ಪಿಸಲಾಯಿತು.
ಭಕ್ತಾದಿಗಳು ಗುರುಗಳ ಸನ್ನಿಧಿಗೆ ಆಗಮಿಸಿ ರಾಯರ ದರ್ಶನ ಒಕ್ಕೂಟ ಪಡೆದು ಪ್ರಸಾದವನ್ನು ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಎಂದು ತಿಳಿಸಿದರು.