ಬೆಂಗಳೂರು: ಚರ್ಮರೋಗ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಚ್.ಎಸ್.ಆರ್. ಬಡಾವಣೆಯಲ್ಲಿ ಸಮಗ್ರ ಚರ್ಮರೋಗ ನಿರ್ವಹಣೆ ಕುರಿತಂತೆ ಎಪಿಕೋರಿಯಮ್ ಚಿಕಿತ್ಸಾಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಾಣ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು, ಚರ್ಮರೋಗದ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಈ ಕೇಂದ್ರದಿಂದ ಬೆಂಗಳೂರು ನಗರದ ಜನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಚರ್ಮರೋಗ ಸಮಸ್ಯೆಗಳು ಹೆಚ್ಚಾಗಿದ್ದು, ಒಂದೇ ಕಡೆ ಪರಿಹಾರ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಡಾ. ಬಿ.ಎಸ್. ಚಂದ್ರಶೇಖರ್ ಮತ್ತು ಇಲೇಶ್ ಖಬ್ಬರ್ ಅವರ ಪರಿಕಲ್ಪನೆಯಿಂದ ಈ ಕೇಂದ್ರ ಆರಂಭಿಸಿದ್ದು, ಡಾ. ಬಿ.ಎಸ್.ಚಂದ್ರಶೇಖರ್ ಅವರು ಪ್ರಖ್ಯಾತ ವೈದ್ಯರಾಗಿದ್ದಾರೆ. ಡರ್ಮಟಾಲಜಿ ಕ್ಷೇತ್ರದಲ್ಲಿ 25ವರ್ಷಗಳ ಅನುಭವ ಹೊಂದಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಕ್ಯುಟಿಸ್ ಅಕಾಡೆಮಿ ಆಫ್ ಕ್ಯುಟೇನಿಯಸ್ ಸೈನ್ಸಸ್ನ ವೈದ್ಯಕೀಯ ನಿರ್ದೇಶಕರಾಗಿರುವುದು ನಮಗೆ ಹೆಮ್ಮೆ ಎಂದರು.
ಈ ಕೇಂದ್ರದಲ್ಲಿ ಚರ್ಮದ ಸಂಬಂಧಿತ ಚಿಕಿತ್ಸೆಗಳಾದ ಪಿಂಟೇಶನ್, ಮೊಡವೆ, ಸೋರಿಯಾಸಿಸ್, ಫಂಗಲ್ ಸೋಂಕು, ಮತ್ತು ಚರ್ಮದ ಅಲರ್ಜಿ ಇತ್ಯಾದಿ ಮತ್ತು ಕೂದಲು ಸಂಬಂಧಿತ ಚಿಕಿತ್ಸೆಗಳಾದ ಕೂದಲು ಉದುರುವಿಕೆಯ ನಿಯಂತ್ರಣ ಮತ್ತು ಕೂದಲು ಮತ್ತೆ ಬೆಳೆಯುವ ಚಿಕಿತ್ಸೆ, ಪಿ ಆರ್ ಪಿ ಮತ್ತು ಸೌಂದರ್ಯ ವರ್ಧಕ ಚಿಕಿತ್ಸೆಗಳಾದ ಲೇಸರ್ ನಿಂದ ಕೂದಲು ತೆಗೆಯುವಿಕೆ, ಬೊಟಾಕ್ಸ್ ಮತ್ತು ಫಿಲ್ಲರ್ಗಳು ಸೇರಿವೆ. ಕೆಮಿಕಲ್ ಪೀಲ್, ಮೆಸೊಥೆರಪಿ ಮತ್ತು ಮೆಸೊ ಬೊಟೊಕ್ಸ್, ಆಂಟಿಏಜಿಂಗ್ ಚಿಕಿತ್ಸೆಗಳು, ಲೇಸರ್ ಟೋನಿಂಗ್, ಲೇಸರ್ ರೀಸರ್ಫೇಸಿಂಗ್, ಫೇಸ್ ಲಿಫ್ಟ್ ಮತ್ತು ಪ್ಲಾಸ್ಟಿಕ್ ಸರ್ಜರಿಗಳು, ಮತ್ತು ಇನ್ನೂ ಅನೇಕ ಚಿಕಿತ್ಸೆಗಳು ಸೇರಿವೆ. ಈ ಸಮಾರಂಭದಲ್ಲಿ ಡಾ. ಸಚ್ಚಿದಾನಂದ ಮತ್ತಿತರ ಗಣ್ಯರು ಭಾಗವಹಿಸಿದ್ದರು.