ಬೆಂಗಳೂರು: ಪಿಎಸ್ಐ ಹಗರಣದ ತನಿಖೆ ನಡೆಸಿದ ಸಿಐಡಿ ತಂಡಕ್ಕೆ ಕುಖ್ಯಾತ ದಂಧೆಕೋರ ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಮೂಲಗಳ ಪ್ರಕಾರ, ಆಪಾದಿತ ವರ್ಗಾವಣೆಗಳು ಸೇರಿದಂತೆ ಹಲವು ಪೊಲೀಸ್ ಇಲಾಖೆಯ ವಿಷಯಗಳಲ್ಲಿ ಸ್ಯಾಂಟ್ರೋ ರವಿ ಭಾಗಿಯಾಗಿದ್ದಾರೆ ಎಂದು ಕಂಡುಹಿಡಿದ ನಂತರ, ಗೃಹ ಇಲಾಖೆ ಅದೇ ತಂಡವನ್ನು ತನಿಖೆಗೆ ಕೇಳಲು ನಿರ್ಧರಿಸಿದೆ.
ಡಿವೈಎಸ್ಪಿ ನರಸಿಂಹ ಮೂರ್ತಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಬೆಂಗಳೂರಿನ ಸಿಐಡಿ ತಂಡ ಈಗ ಮೈಸೂರಿನಲ್ಲಿದ್ದು, ಪ್ರಕರಣದ ತನಿಖೆ ನಡೆಸುತ್ತಿದೆ.
ಸ್ಯಾಂಟ್ರೊ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿ ತನಿಖೆಗಾಗಿ ಮೈಸೂರಿಗೆ ಕರೆತರಲಾಗಿತ್ತು.