News Karnataka Kannada
Wednesday, May 08 2024
ಬೆಂಗಳೂರು ನಗರ

ಬೆಳ್ತಂಗಡಿ: ಬಸ್ ನಿಲ್ದಾಣ ಅಭಿವೃದ್ಧಿಗೆ 12 ಕೋಟಿ ರೂ. ಬಿಡುಗಡೆ

Belthangady: Rs 12 crore allocated for the development of bus stand. Release
Photo Credit : By Author

ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಇದೀಗ ಬಸ್ ನಿಲ್ದಾಣ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾರವರ ಮುತುವರ್ಜಿಯಿಂದ 12 ಕೋಟಿ ರೂ. ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಹಲವಾರು ವರ್ಷಗಳ ಬೇಡಿಕೆ ಇದಾಗಿದ್ದು, ನಗರ ಸೌಂದರ್ಯಕ್ಕ ಮೆರುಗು ತರಲಿದೆ.

ಈಗಾಗಲೆ ಟ್ರೀ ಪಾರ್ಕ್, ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು ನಗರ ಪಂಚಾಯತ್ ವತಿಯಿಂದಲೂ ವಿವಿಧ ಸೌಂದರ್ಯ ಕಾರ್ಯ ನಡೆಯುತ್ತಿವೆ. ಬೆಳ್ತಂಗಡಿ ಬಸ್ ನಿಲ್ದಾಣಕ್ಜೆ ಕಂದಾಯ, ನಗರ ಸಬೆ, ಅರಣ್ಯ ಇಲಾಖೆಯ ಜಮೀನು ಸಾರಿಗೆ ಇಲಾಖೆಗೆ ಹಸ್ತಾಂತರ ಅಗಿರುವುದು ರಾಜ್ಯದ ಇತಿಹಾಸದಲ್ಲೆ ಪ್ರಥಮ ಶಾಸಕ ಹರೀಶ್ ಪೂಂಜಾರವರು ಮುಖ್ಯ ಮಂತ್ರಿಗಳ, ಎಲ್ಲಾ ಸಚಿವರುಗಳ ವಿಶ್ವಾಸ ಪಡೆದು ಬೆಂಗಳೂರಲ್ಲಿ ಸಚಿವರುಗಳ ಹಾಗೂ ಎಲ್ಲಾ ಅಧಿಕಾರಿಗಳ ಸಭೆ ಕರೆದ ಫಲವಾಗಿ ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ 1.20 ಎಕರೆ ನಿವೇಶನ ಮಂಜೂರಾಗಿ ಇದೀಗ 12 ಕೋಟಿ ರೂ. ಅನುದಾನ ಬಿಡುಗಡೆ ಭಾಗ್ಯ ಬಂದಿದೆ.

ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲ

ಸರಿಯಾಗ ಬಸ್ ತಂಗುದಾಣ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ತಾಲೂಕು ಕೇಂದ್ರ ವಾದ ಕಾರಣ ನೂರಾರು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾದ್ಯವಾಗದೆ ಮಳೆ, ಗಾಳಿ, ಬಿಸಿಲಿಗೆ ಸಂಕಷ್ಟ ಎದುರಿಸುತ್ತಿದ್ದರು. ಸಾರ್ವಜನಿಕರು ಇದೇ ಸಮಸ್ಯೆ ಎದುರಿಸುತ್ತಿದ್ದರು. ಇನ್ನು ಮುಂದೆ ಯಾವುದೇ ತೊಂದರೆ ಆಗಲಾರದು.

ಕೆ. ಎಸ್. ಅರ್. ಟಿ. ಸಿ. ಇಲಾಖೆ ಸುಪರ್ದಿಗೆ ಕೆ. ಎಸ್.ಆರ್. ಟಿ .ಸಿ . ‌‌‌‌ ಬಸ್ ನಿಲ್ದಾಣಕ್ಕೆ ವಿಷೇಶ ಅನುದಾನ ಬಿಡುಗಡೆಗೊಳಿಸಿದ್ದು ಸುಂದರ ಕಟ್ಟಡ ನಿರ್ಮಾಣವಾಗಲಿದೆ. ಕೆ. ಎಸ್. ಅರ್. ಟಿ. ಸಿ.ಗೆ ಕೋಣೆ, ಕಂದಾಯ ಅಧಿಕಾರಿಗಳ ಕಚೇರಿ, ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಲಿದ್ದು ವಿಶಾಲವಾದ ಬಸ್ ನಿಲ್ದಾಣ ನಗರಕ್ಕೆ ಆಕರ್ಷಣೆಯಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು